ಗ್ರಾಮ ಪಂಚಾಯತು ಧರ್ಮಸ್ಥಳ ಇವರಿಂದ ಔಷಧಿ ವಿತರಣೆ

ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್-19 ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು, ದಿನಾಂಕ ಮೇ 12 ರಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ  ಶ್ರೀ ಪಿ ಶ್ರೀನಿವಾಸರಾವ್, ಸದಸ್ಯರಾದ ಶ್ರೀ ಸುಧಾಕರ ಗೌಡ, ಶ್ರೀ ಹರ್ಷಿತ್ ಜೈನ್, ಇವರು ಬಡವರಿಗೆ ನೀಡಲು ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀ ಆಕಾಶ್ ಇವರ ಮುಖಾಂತರ ಒಟ್ಟು 1500 ಸಂಖ್ಯೆಯ ಔಷಧಿ ಮಾತ್ರೆಗಳನ್ನುನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಉಮೇಶ್ ಕೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು. ವಿಶ್ವ ದಾದಿಯರ ದಿನಾಚರಣೆಯ ಈ ದಿನ ಆರೋಗ್ಯ ಸಹಾಯಕಿಯರಿಗೆ ಶುಭಾಶಯ ಕೋರಲಾಯಿತು.

Leave A Reply

Your email address will not be published.