ಸರ್ವೆ : ಸಿಡಿಲಿಗೆ ಸುಟ್ಟ ವಿದ್ಯುತ್ ವಯರಿಂಗ್-ಮುಗ್ದ ಜೀವ ಬಲಿ

ಪುತ್ತೂರು: ಸಿಡಿಲು ಬಡಿದು ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು , ಮನೆಯ ಸಾಕು ನಾಯಿಯೂ ಕೂಡ ಸಿಡಿಲಿನಬ್ಬರಕ್ಕೆ ಬಲಿಯಾದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.


ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಹರೀಶ್ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದಿದೆ. ಪರಿಣಾಮ ಮನೆಯ ವಿದ್ಯುತ್ ಮೈನ್ ಸ್ವಿಚ್ ಹಾಗೂ ವಯರಿಂಗ್ ಸುಟ್ಟು ಹೋಗಿದೆ.

ಇದೇ ಸಮಯದಲ್ಲಿ ಕೊಟ್ಟಿಗೆಯ ಬಳಿಯಲ್ಲಿ ಕಟ್ಟಿ ಹಾಕಿದ್ದ ಅವರ ಸಾಕು ನಾಯಿ ಸಿಡಿಲಿನಬ್ಬರಕ್ಕೆ ಬಲಿಯಾಗಿದೆ.
ಘಟನೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ.

Leave A Reply

Your email address will not be published.