ಕೋವಿಡ್ ಸಂದರ್ಭದಲ್ಲಿ ಜನರಿಗೆ ನಿರಂತರ ಸ್ಪಂದನೆ – ಹರೀಶ್ ಕಂಜಿಪಿಲಿ

ಸುಳ್ಯದಲ್ಲಿ ಸಚಿವ ಅಂಗಾರ ನೇತೃತ್ವದಲ್ಲಿ ವಾರ್ ರೂಮ್ ರಚಿಸಿ ಜನಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕೆಲಸವನ್ನು ಕಳೆದ 15ದಿನಗಳಿಂದಲೂ ಮಾಡುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ, ಔಷಧಿ ಪೂರೈಕೆ, ಅಂತ್ಯ ಸಂಸ್ಕಾರಕ್ಕೆ ನೆರವು, ಈ ರೀತಿ ನಿರಂತರ ಜನಸೇವೆ ಯಲ್ಲಿ ಜನಪ್ರತಿನಿದಿಗಳು ಹಾಗೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಈಗ ಲಾಕ್ ಡೌನ್ ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರು ಕೆಲವು ದಿನಗಳ ಹಿಂದೆ ಲಾಕ್ ಡೌನ್ ಮಾಡದಿರುವ ಕುರಿತು ಟೀಕಿಸಿದ್ದರು.

ಅಧಿಕಾರ ಇಲ್ಲದೇ ಹಪಹಪಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಟೀಕೆ ಮಾಡುವುದೇ ಹವ್ಯಾಸವಾಗಿದೆ. ದೇಶದ ಈ ಕಷ್ಟಕಾಲದಲ್ಲಿಯೂ ಜನರಿಗೆ ಈ ಬಾರಿಯೂ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿಯನ್ನು ನೀಡುವ ಕೆಲಸ ಕೇಂದ್ರ ಸರಕಾರ ಮಾಡಿದೆ. ಹಿಂದಿನ ಲಾಕ್ ಡೌನ್ ಮಾಡುವ ಸಮಯದಲ್ಲೂ ಅನೇಕ ರೀತಿಯಲ್ಲಿ ಬಡಜನರಿಗೆ ನೆರವಾಗುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿವೆ.ಕೋವಿಡ್ ನ ತುರ್ತು ಸಂದರ್ಭದಲ್ಲಿ ಕೂಡ ಕೇವಲ ಟೀಕೆ ಮಾಡುವುದನ್ನೇ ಉದ್ಯೋಗ ಮಾಡಿಕೊಳ್ಳುವ ಬದಲು ರಾಜಕೀಯ ಬಿಟ್ಟು ಕಾಂಗ್ರೆಸ್ ನಾಯಕರು ಜನರ ಕಷ್ಟಗಳಿಗೆ ನೆರವಾಗಿ ಎಂದು ಹೇಳಿದರು.

ಪಶ್ಚಿಮಬಂಗಾಳದಲ್ಲಿ ಇಷ್ಟೊಂದು ರಾಜಕೀಯ ಹಿಂಸಾಚಾರ ನಡೆದಿದ್ದರೂ ಕಾಂಗ್ರೆಸ್ಸಿಗರ ದಿವ್ಯ ಮೌನವು ಅವರ ರಾಜಕೀಯ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಜನತಾ ಪಾರ್ಟಿಯು ಒಂದು ನೈಜ ರಾಜಕೀಯ ಸಂಘಟನೆಯಾಗಿ ಜನರ ಪರವಾಗಿ ದನಿ ಎತ್ತುವ ಕೆಲಸವನ್ನು ಮಾಡುತ್ತಿದೆ. ಅದರ ಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹರೀಶ್ ಕಂಜಿಪಿಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.