ಪುತ್ತೂರು, ಸುಳ್ಯ |  ಅವಳಿ ಮಕ್ಕಳಿಗೆ ಜೀವ ನೀಡಿ ಮರಳಿ ಬಾರದ ಲೋಕಕ್ಕೆ ತೆರಳಿದ ಹಸಿ ಬಾಣಂತಿ !

ಅವಳಿ ಮಕ್ಕಳಿಗೆ ಜನ್ಮ ನೀಡಿದ ಹಸಿ ಬಾಣಂತಿಯೊಬ್ಬಳು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್‌ರವರ ಪತ್ನಿ ಪೂಜಿತಾ ಮೃತಪಟ್ಟ ಮಹಿಳೆ.

ಪೂಜಿತಾರವರು ಹೆರಿಗೆಗೆಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ, ಮೇ.9ರಂದು ಬೆಳಿಗ್ಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಬೆಳಿಗ್ಗೆ ಆರೋಗ್ಯವಾಗಿದ್ದ ಅವರಿಗೆ ಮಧ್ಯಾಹ್ನ ವೇಳೆಗೆ ರಕ್ತಸ್ರಾವ ಉಂಟಾಗಿದೆ. ನಂತರ ತೀವ್ರ ರಕ್ತ ಸ್ರಾವ ಸಂಭವಿಸಿದಾಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಸಂಜೆಯ ವೇಳೆಗೆ ಸ್ವಲ್ಪ ಚೇತರಿಸಿಕೊಂಡಂತೆ ಇದ್ದರು. ಆದರೆ ಆಕೆಗೆ ಬ್ಲೀಡಿಂಗ್ ಶುರುವಾಗಿದೆ. ಕೊನೆಗೆ ಆಕೆ ಲೋ ಬಿಪಿ ಆಗಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಅವರ ಇಬ್ಬರು ಮಕ್ಕಳೂ ಆರೋಗ್ಯವಾಗಿದ್ದು, ಸದ್ಯಕ್ಕೆ ಪುತ್ತೂರು ಆಸ್ಪತ್ರೆಯಲ್ಲಿದ್ದಾರೆ.

ಮೃತ ಪೂಜಿತಾ ತಂದೆ ಸುಳ್ಯ ತಾಲೂಕಿನ ಕಲ್ಮಡ್ಕ ಮೂಲೆಮನೆ ವಿಶ್ವನಾಥ ಗೌಡರು, ತಾಯಿ, ಸಹೋದರ, ಪತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಪೂಜಿತಾ ಬಿಎಡ್ ಮುಗಿಸಿದ್ದು, ಇತ್ತೀಚೆಗಷ್ಟೇ ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಯಾಗಿದ್ದರು.

Leave A Reply

Your email address will not be published.