ಗುಂಪು ಕಟ್ಟಿಕೊಂಡು ಸೈನಿಕರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ | ಆರೋಪಿಗೆ ಮಧ್ಯಂತರ ಜಾಮೀನು

ನೆಲ್ಯಾಡಿಯಲ್ಲಿ ಬೈಕ್ ಹಾಗೂ ಕಾರು ಮಧ್ಯೆ ಅಪಘಾತ ನಡೆದು, ಆ ನಂತರ ಕಾರಿನ ಮಾಲಕರಾದ, ಭಾರತೀಯ ಸೈನಿಕನ ಮನೆ ಹುಡುಕಿಕೊಂಡು ಹೋಗಿ ದಾಳಿ ಮಾಡಿದ ವ್ಯಕ್ತಿಗೆ ಇದೀಗ ಜಾಮೀನು ಸಿಕ್ಕಿದೆ.

ನೆಲ್ಯಾಡಿಯ ಪೊಯ್ಯೆ ಸಮೀಪ ಕಾರು ಬೈಕು ಪರಸ್ಪರ ಒರೆಸಿಕೊಂಡಿದ್ದವು ಎನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ ಉಂಟಾಗಿತ್ತು. ಬಳಿಕ ತಂಡವೊಂದು ಕಾರು ಚಾಲಕರಾದ ಭಾರತೀಯ ಸೇನೆಯ ಸೈನಿಕರಿದ್ದ ಮನೆಗೆ ಹುಡುಕಿಕೊಂಡು ಬಂದು ಹಲ್ಲೆಗೆ ಯತ್ನಿಸಿತ್ತು. ಗುಂಪು ಕಟ್ಟಿಕೊಂಡು ಬಂದ ಆ ತಂಡದಲ್ಲಿ 30 ಕ್ಕೂ ಜಾಸ್ತಿ ಜನ ಇದ್ದರು.

ಈ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಮೇ 4 ರಂದು ನಡೆದಿತ್ತು

ಹಲ್ಲೆ ಪ್ರಕರಣದಲ್ಲಿ ಕಾರು ಚಾಲಕರಾದ ಸೈನಿಕರಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿ ನಂತರ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Leave A Reply

Your email address will not be published.