ನೆಲ್ಯಾಡಿ : ಬೈಕ್‌ಗೆ ಕಾರು ಡಿಕ್ಕಿ | ಬೈಕ್ ಸಹಸವಾರೆ ಗರ್ಭಿಣಿ ಗಾಯಗೊಂಡರೂ ಉಪಚರಿಸದೇ ತೆರಳಿದ ಕಾರು ಚಾಲಕ | ಪೊಲೀಸರಿಂದ ನೀರಕಟ್ಟೆಯಲ್ಲಿ‌ ಕಾರು ವಶಕ್ಕೆ

ನೆಲ್ಯಾಡಿ : ಬೈಕ್ ಗೆ ಢಿಕ್ಕಿ ಯಾಗಿ ಬೈಕ್ ಸವಾರ ಹಾಗೂ ಸಹ ಸವಾರೆ ಗಾಯಗೊಂಡಿದ್ದರೂ ಉಪಚರಿಸದೆ ತೆರಳಿದ ಕಾರನ್ನು ನೀರಕಟ್ಟೆ ಸಮೀಪ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಮೇ 6ರಂದು ಈ ಘಟನೆ ನಡೆದಿದೆ.
ನೆಲ್ಯಾಡಿ ಮರುವೋಡಿ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ವಿದ್ಯಾ ರವರು ಆಸ್ಪತ್ರೆಗೆ ಹೋಗಲೆಂದು ಬೈಕ್ ನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯಿಂದ ಆಸ್ಪತ್ರೆಗೆ ಹೋಗುವ ರಸ್ತೆಗೆ ತಿರುಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬಂದ ಕಾರೊಂದು ಇವರ ಬೈಕ್ ಗೆ ಢಿಕ್ಕಿ ಯಾಗಿದೆ.

ಘಟನೆಯಿಂದಾಗಿ ಮೋಹನ್ ಹಾಗೂ ಅವರ ಗಭಿ೯ಣಿ ಪತ್ನಿ ರಸ್ತೆ ಗೆ ಬಿದ್ದು ಗಾಯಗೊಂಡಿದ್ದರು. ಕಾರಿನಲ್ಲಿದ್ದವರೂ ಕಾರು ನಿಲ್ಲಿಸಿ ಸ್ಥಳಕ್ಕೆ ಬಂದರೂ ಗಾಯಾಳುಗಳನ್ನು ಉಪಚರಿಸದೆ ಉಪ್ಪಿನಂಗಡಿ ಕಡೆಗೆ ತೆರಳಿದರು.

ಸ್ಥಳೀಯ ರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ನೀರಕಟ್ಟೆ ಸಮೀಪ ಕಾರು ಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.