ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಜೇಶ್ ಕೇಳುತ್ತಿದ್ದಾರೆ ಸಹೃದಯರ ನೆರವಿನ ಹಸ್ತ

ಉಡುಪಿ ಸಮೀಪದ ಗುಡ್ಡೆಯಂಗಡಿ ನಿವಾಸಿಯಾದ ರಾಜೇಶ್ ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಇವರು ತಮ್ಮ ಬಡ ಕುಟುಂಬದ ಮನೆಯ ಏಕೈಕ ಆಧಾರ ಸ್ತ೦ಭವಾಗಿದ್ದರು.

ಆದರೆ ಈಗ ಈ ರೋಗದಿಂದ ಮನೆಯನ್ನು ನಿರ್ವಹಿಸಲು ಸಾದ್ಯವಾಗುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ, ತಾಯಿ ಸಣ್ಣ ಪ್ರಾಯದ ಎರಡು ಮಕ್ಕಳು ಇದ್ದಾರೆ. ಈ ಕುಟುಂಬದ ಜವಾಬ್ದಾರಿ ಹಾಗೂ ತನ್ನ ಅನಾರೋಗ್ಯದ ಪತಿಯಾದ ರಾಜೇಶ್ ಇವರ ಜವಾಬ್ದಾರಿ ಜ್ಯೋತಿ ಇವರ ಮೇಲೆ ಇದೆ.

ರಾಜೇಶ್ ಅವರ ಅರೋಗ್ಯ ತೀರಾ ಹದಗೆಟ್ಟಿದ್ದು ಕುಟುಂಬಕ್ಕೆ ವೈದ್ಯರ ಸಲಹೆಯ೦ತೆ ರಾಜೇಶ್ ಅವರಿಗೆ ತಿಂಗಳಿಗೆ 6 ಚುಚ್ಚುಮದ್ದಿನ ಅಗತ್ಯವಿದ್ದು ಒಂದು ಚುಚ್ಚುಮದ್ದಿನ ಬೆಲೆ 20,000 ರೂಪಾಯಿ ಆಗಿದ್ದು ಈ ಬೆಲೆಯನ್ನು ಕುಟುಂಬವು ಹೊಂದಿಸಲು ಸಾದ್ಯವಾಗದೆ ಕುಟುಂಬವು ದಾನಿಗಳ ನೆರವು ಅಂಗಲಾಚಿದೆ .

ದಾನಿಗಳು ತಮ್ಮಲ್ಲಿ ಸಾದ್ಯವಾದಷ್ಟು ಈ ಅಸಹಾಯಕ ಕುಟುಂಬಕ್ಕೆ ನೆರವಾಗಬೇಕಾಗಿ ಕುಟುಂಬಸ್ಥರು ಕೇಳಿಕೊಳ್ಳುತ್ತಿದ್ದಾರೆ.

Ph no : +918495832560

ಬ್ಯಾಂಕ್ ವಿವರ :

Canara Bank
Name : Jyothi R
W/o Rajesh
A/c no :01692200036727
Branch address :
Manipura via Mood belle
Udupi dist
Manipura – 576120
IFSC code :
CNRB0010169

Leave A Reply

Your email address will not be published.