ಕಡಬ | ಸಿಡಿಲು ಬಡಿದು ಮನೆಗೆ ಅಪಾರ ಹಾನಿ
ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸುತ್ತಮುತ್ತ ಬುಧವಾರ ಸಾಯಂಕಾಲ ಗುಡುಗು, ಗಾಳಿ ಸಹಿತ ಧಾರಕಾರ ಮಳೆಯಾಗಿದ್ದು, ಗ್ರಾಮದ ಮರಿಕೆ ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ನಷ್ಟವಾಗಿದೆ.
ಮರಿಕೆ ಕೇಶವ ಗೌಡ ಎಂಬುವವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮುಂಭಾಗದಲ್ಲಿನ ಪಿಲ್ಲರ್ಗೆ, ಗೋಡೆಗೆ , ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಸ್ವಿಚ್ ಬೋರ್ಡು ಗೋಡೆಯಿಂದ ಕಿತ್ತು ಬಂದಿದೆ.
ಘಟನೆಯಿಂದ ಅಪಾರ ನಷ್ಟವಾಗಿದೆ.
ಘಟನೆ ವೇಳೆ ಮನೆ ಮಂದಿ ಮನೆಯೊಳಗಡೆಯಿದ್ದು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಪಾನ್ಯಾಲು ಭೇಟಿ ನೀಡಿದ್ದಾರೆ. ಕೊಯಿಲ ಗ್ರಾಮ ಸೇರಿದಂತೆ ರಾಮಕುಂಜ, ಹಳೆನೇರಿಂಕಿ, ಆಲಂಕಾರು ಗ್ರಾಮಗಳಲ್ಲಿಯೂ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.