ಗೋಪಾಲ್ ನಾಯ್ಕ್ ಮೇಲಿನ ಹಲ್ಲೆಯನ್ನು ಖಂಡಿಸಿ ಶ್ರೀ ರಾಮ ಸೇನೆಯ ಮುಖಂಡರುಗಳಿಂದ ಮನೆಗೆ ಭೇಟಿ. ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ

ಶ್ರೀರಾಮಸೇನೆ ಕಡಬ ಮುಖಂಡರಾದ ಗೋಪಾಲ್ ನಾಯಕ್ ಮೇಲಿನ ಹಲ್ಲೆಯನ್ನು ವಿರೋಧಿಸಿ ಶ್ರೀ ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಹಾಗೂ ಇತರ ಮುಖಂಡರುಗಳು ಇಂದು ಮನೆಗೆ ಭೇಟಿ ಕೊಟ್ಟು ಅವರಿಗೆ ಧೈರ್ಯ ತುಂಬಿದರು.

ನಿಮ್ಮೊಂದಿಗೆ ನಾವಿದ್ದೇವೆ, ಹಿಂದೂ ಮುಖಂಡನ ಮೇಲೆ ಹಿಂದುಗಳೇ ಮಾಡಿದ ಹಲ್ಲೆ, ಕೊಲೆಯತ್ನ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಭೇಟಿಯ ಸಂದರ್ಭದಲ್ಲಿ ಮಂಗಳೂರು-ಉಡುಪಿ ವಿಭಾಗ ಪ್ರಧಾನ ಹರೀಶ್ ಅಮ್ಟಾಡಿ ಮಂಗಳೂರು ಜಿಲ್ಲಾ ಅಧ್ಯಕ್ಷ ಪ್ರದೀಪ್ ಮೂಡುಷೆಡ್ಡೆ ಹಾಗೂ ಕಡಬ ತಾಲೂಕು ಅಧ್ಯಕ್ಷ ಅಶ್ವಥ್ ಕಡಬ ಹಾಗೂ ತಾಲೂಕು ಉಪಾಧ್ಯಕ್ಷರು ಹಾಗೂ ಇನ್ನಿತರರು ಜೊತೆಗಿದ್ದರು.

Leave A Reply

Your email address will not be published.