ಕಡಬದ ಶ್ರೀ ರಾಮ ಸೇನೆಯ ಮುಖಂಡರ ಮೇಲೆ ತಲ್ವಾರ್ ನಿಂದ ಹಲ್ಲೆ !

ಕಡಬದ ಶ್ರೀ ರಾಮ ಸೇನೆಯ ಮುಖಂಡರೋರ್ವರ ಮೇಲೆ ನಾಲ್ಕು ಬೈಕ್ ನಲ್ಲಿ ಬಂದ ಅವರ ತೀರ ಪರಿಚಿತರ ತಂಡವೊಂದು ಹಲ್ಲೆಗೆ ಮುಂದಾಗಿ ತಲ್ವಾರಿನಿಂದ ದಾಳಿಗೆ ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಶ್ರೀ ರಾಮ ಸೇನೆ ಮುಖಂಡ ಗೋಪಾಲ ನಾಯ್ಕ ಮೇಲಿನ ಮನೆ ಅವರು ತನ್ನ ಸಂಬಂಧಿಕರಿಗೆ ಸ್ಕೂಟಿಯಲ್ಲಿ ಕಡಬದಿಂದ ಔಷಧ ಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕೋಡಿಂಬಾಳದ ಅಜ್ಜಿಕಟ್ಟೆ ಸಮೀಪ ಸಮೀಪ ದಾಳಿ ಆಗಿರುವುದಾಗಿ ಅವರು ಆರೋಪಿಸಿದ್ದಾರೆ. ಆ ನಂತರ ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಇತ್ತೀಚೆಗೆ ಕಡಬದಲ್ಲಿ ಕಬಡ್ಡಿ ಪಂದ್ಯಾಟದ ವೇಳೆ ನಡೆದ ಹೊಡೆದಾಟವೇ ಈ ದಾಳಿಗೆ ಕಾರಣವಾಗಿದೆ ಎನ್ನಲಾಗಿದೆ.
ಅನಿಲ್ ಮತ್ತು ಆತನ ಸಹಚರರು ಕೊಲೆಗೆ ಯತ್ನಿಸಿರುವುದಾಗಿ ಗೋಪಾಲ ನಾಯ್ಕ ಆರೋಪಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಇಲ್ಲಿಯತನಕ ಪೊಲೀಸ್ ತಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Leave A Reply

Your email address will not be published.