ಬೆಳ್ತಂಗಡಿಯ ಕೊಕ್ರಾಡಿ ಕೊರಂಬಾಡ್ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಸಿದ್ದತೆ ಸ್ಥಳೀಯರ ತೀವ್ರ ವಿರೋಧ

ಬೆಳ್ತಂಗಡಿ: ತಾಲೂಕಿನ ಕೊಕ್ರಾಡಿ ಗ್ರಾಮದ ಕೊರಂಬಾಡ್ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊರ್ವರು ಕಲ್ಲು ಗಣಿಗಾರಿಕೆಗೆ ಸಿದ್ದತೆಯನ್ನು ನಡೆಸುತ್ತಿದ್ದುಈ ಪ್ರದೇಶದ ಪಕ್ಕದಲ್ಲಿ ಹಲವಾರು ಮನೆಗಳು ಕೃಷಿ ತೋಟಗಳು ಇದ್ದು ಮುಂದೆ ಸಾಕಷ್ಟು ತೊಂದರೆಗಳು ಆಗುತ್ತದೆ.

ಈ ಕಲ್ಲಿನ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅನುಮತಿಯನ್ನು ನೀಡಬಾರದು ಎಂದು ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಲೋಕಯ್ಯ ಪೂಜಾರಿ ,ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ ಪರಮೇಶ್ವರ,ಸದಸ್ಯರಾದ ಜಗದೀಶ್ ಹೆಗ್ಡೆ ,ಶ್ರೀಮತಿ ಶೋಭಾ ನಾಯ್ಕ ಸ್ಥಳೀಯ ನಿವಾಸಿಗಳು, ಕೋವಿಡ್ ನಿಯಮಗಳನ್ನು ಪಾಲಿಸಿ ಉಪಸ್ಥಿತರಿದ್ದರು.

Leave A Reply

Your email address will not be published.