ಪುತ್ತೂರಿನ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ

ಪುತ್ತೂರಿನ ರಾಗಿದಕುಮೇರು ನಿವಾಸಿ ನಿರಂಜನ ರೈ (35) ಎಂಬವರ ಮೃತದೇಹವು ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಪುತ್ತೂರು ನಗರದ ಹೊರವಲಯದ ರಾಗಿದಕುಮೇರು ನಿವಾಸಿ ಪದ್ಮನಾಭ ರೈ ಎಂಬವರ ಪುತ್ರ ನಿರಂಜನ್ ರೈ ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋರಹೋದವರು ಪುನಃ ಮನೆಗೆ ಬಂದಿರಲಿಲ್ಲ.

ನಿರಂಜನ್ ಅವರು ತನ್ನ ಸ್ನೇಹಿತನ ಬೈಕ್ ತೆಗೆದುಕೊಂಡು ಹೋಗಿದ್ದು ಬೈಕ್ ಇಂದು ಪಾಣೆಮಂಗಳೂರು ಸೇತುವೆಯ ಮೇಲೆ ಪತ್ತೆಯಾಗಿದ್ದು, ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಮೃತರು ತಂದೆ, ತಾಯಿ, ತಮ್ಮ,ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

Leave A Reply

Your email address will not be published.