ರೌಫ್ ಶರೀಫ್ ರವರಿಗೆ ಸೂಕ್ತ ಚಿಕೆತ್ಸೆ ನೀಡುವಂತೆ ಕೋರಿ ಮತ್ತು ಶೀಘ್ರ ಬಿಡುಗಡೆ ಮಾಡುವಂತೆ ಅಭಿಯಾನ

ಉಪ್ಪಿನಂಗಡಿ : ಅನ್ಯಾಯವಾಗಿ ಯು. ಪಿ ಯ ಮಥುರಾ ಜೈಲಿನಲ್ಲಿರುವಂತಹ ಅಮಾಯಕ ವಿದ್ಯಾರ್ಥಿ ನಾಯಕ ರೌಫ್ ಶರೀಫ್ ರವರ ಬಂಧನವನ್ನು ಖಂಡಿಸಲಾಗಿದೆ.

ಅವರಿಗೆ ಇದೀಗ ಮಥುರಾ ಜೈಲಿನಲ್ಲಿ ಕೊರೋನಾ

ಪಾಸಿಟಿವ್ ಕಂಡು ಬಂದಿದ್ದು ಯಾವುದೇ ಚಿಕಿತ್ಸೆಯನ್ನು ನೀಡದೆ ಇರುವಂತಹ ಯು ಪಿ ಪೊಲೀಸರ ಮತ್ತು ಸರಕಾರದ ನಡೆಯನ್ನು ಖಂಡಿಸಿ ದೇಶಾದ್ಯಂತ ಸಿ, ಎಫ್, ಐ, ಅಭಿಯಾನ ಹಮ್ಮಿಕೊಂಡಿದೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಏರಿಯಾ ವತಿಯಿಂದ ರೌಫ್ ಶರೀಫ್ ರವರಿಗೆ ಸೂಕ್ತ ಚಿಕೆತ್ಸೆ ನೀಡುವಂತೆ ಕೋರಿ ಮತ್ತು ಶೀಘ್ರ ಬಿಡುಗಡೆ ಮಾಡುವಂತೆ ಕಡಬ, ಅಂಡೆತ್ತಡ್ಕ, ಕೋಲ್ಪೆ, ಆತೂರು, ಗೋಳಿತೊಟ್ಟು ವ್ಯಾಪ್ತಿಯಲ್ಲಿ ಪ್ಲೆ ಕಾರ್ಡ್ ಪ್ರದರ್ಶನ ಮಾಡಲಾಯಿತು.

ಇದರ ಭಾಗವಾಗಿ ಉಪ್ಪಿನಂಗಡಿ ವ್ಯಾಪ್ತಿಯ ಕಡಬ, ಆತೂರು, ಕೋಲ್ಪೆ, ಅಂಡೆತ್ತಡ್ಕ, ಗೋಳಿತೊಟ್ಟು ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪ್ಲೆ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಿ ದರುು.

ಉಪ್ಪಿನಂಗಡಿ ಏರಿಯಾ ಅಧ್ಯಕ್ಷರಾದ ರಿಜ್ವಾನ್ ಗೋಳಿತೊಟ್ಟು ಕಾರ್ಯದರ್ಶಿ ಮರ್ಝುಕ್ ಕೋಲ್ಪೆ ಹಾಗೂ ಏರಿಯಾ ಸಮೀತಿ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Leave A Reply

Your email address will not be published.