ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ | ವಿವರಣೆ ಕೇಳಿದ ಎಡಿಜಿಪಿ

ಮಂಗಳೂರು ಕಮಿಷನರ್ ಶಶಿ ಕುಮಾರ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದ ಘಟನೆ ವರದಿಯಾಗಿದೆ.

ಭಾನುವಾರ ಬೆಳಿಗ್ಗೆ ಮಂಗಳೂರು ಜಿಲ್ಲಾ ಕಾರಾಗ್ರಹದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿತ್ತು.

ಘಟನೆ ತಿಳಿದ ತಕ್ಷಣ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಅವರು ಜೈಲಿಗೆ ತೆರಳಿದ್ದರು.

ಕಮಿಷನರ್ ಸೆಲ್ ಒಳಗಡೆ ಹೋಗಿ ತೆರಳಿ ಸಮೀರ್ ಎಂಬಾತನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಸೇರಿ 15ಕ್ಕೂ ಅಧಿಕ ಮಂದಿಯ ತಂಡ ಕಮಿಷನರ್ ಮೇಲೆ ಹಲ್ಲೆ ನಡೆಸಿದೆ. ಇದರಿಂದಾಗಿ ಕಮಿಷನರ್ ಮೂಗಿನಿಂದ ರಕ್ತ ಸುರಿದಿದೆ. ಘಟನೆಯಲ್ಲಿ ಜೈಲರ್ ಚಂದನ್ ಪಾಟೀಲ್ ಗೆ ಗಂಭೀರವಾದಂತಹ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಎಡಿಜಿಪಿ ವಿವರಣೆಯನ್ನು ಕೇಳಿದ್ದಾರೆ.

Leave A Reply

Your email address will not be published.