FREE BUS || ಬೆಂಗಳೂರಿನಿಂದ ಬೆಳ್ತಂಗಡಿಗೆ ತಲುಪಿದ ಶಾಸಕ ಹರೀಶ್ ಪೂಂಜಾ ‘ ಶ್ರಮಿಕ ಸರ್ವಿಸ್ ‘ ಬಸ್ಸು | ಇಂದು ಕೂಡಾ ಬಸ್ ವ್ಯವಸ್ಥೆ ಇರಲಿದೆ !!

ಕೊರೊನಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇವತ್ತು ರಾತ್ರಿಯಿಂದ ಬಸ್ ಸಂಚಾರ ಇರೋದಿಲ್ಲ
ಇನ್ನು 14 ದಿನದ ನಂತರವಷ್ಟೆ ಊರಿಗೆ ಬರಬೇಕಾಗುತ್ತದೆ.

ಅದ್ದರಿಂದ ಬೆಂಗಳೂರಿನಿಂದ ಬೆಳ್ತಂಗಡಿಗೆ ಸ್ವ ಇಚ್ಛೆಯಿಂದ ಬರುವವರಿಗಾಗಿ ಇಂದು ರಾತ್ರಿ ಬಸ್ ವ್ಯವಸ್ಥೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಲ್ಪಿಸಿದ್ದಾರೆ. ಒಂದು ಬಸ್ಸು ನಿನ್ನೆಯೇ ರಾತ್ರಿ 10.30 ಕ್ಕೆ ಬೆಂಗಳೂರಿನಿಂದ ಹೊರಟಿದ್ದು ಬೆಳ್ತಂಗಡಿಗೆ ಮುಂಜಾನೆ 5 ಗಂಟೆಗೆ ತಲುಪಿದೆ. ಒಟ್ಟು 40 ಜನ ಅದರಲ್ಲಿ ಪ್ರಯಾಣಿಸಿದರು ಎನ್ನಲಾಗಿದೆ.

ಇವತ್ತು 27th ಏಪ್ರಿಲ್ ಕೂಡ ಬಸ್ಸಿನ ವ್ಯವಸ್ಥೆ ಇದ್ದು ಅನಿವಾರ್ಯವಾಗಿ ಸ್ವಇಚ್ಛೆಯಿಂದ ಬೆಂಗಳೂರಿನಿಂದ ತಮ್ಮೂರಿಗೆ ಮರಳುವ ಜನ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಬರುವವರು ದಯವಿಟ್ಟು ಸ್ವ ವಿವರಗಳನ್ನು ಈ ಕೆಳಗಿನ ನಂಬರಿಗೆ ಸಂಪರ್ಕಿಸಿ ತಿಳಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಕಳೆದ ಸಲದ ಲಾಕ್ ಡೌನ್ ಕೊನೆಯಲ್ಲಿ ಕೂಡ ಹರೀಶ್ ಪೂಂಜಾ ಅವರು ಹಲವು ಊರುಗಳಿಂದ ತಮ್ಮ ತಮ್ಮ ಊರುಗಳಿಗೆ ಬರಲು ಬಸ್ ವ್ಯವಸ್ಥೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಾಹಿತಿಗಳನ್ನು ಬೆಳ್ತಂಗಡಿ ಶಾಸಕರ ಶ್ರಮಿಕ ಕಚೇರಿಯ ವಿನೋದ್ 9901763573, ನವೀನ್ 8862597826 ಇವರುಗಳನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ನೀಡಿದ್ದಾರೆ.

ಅದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಶ್ರಮಿಕ- ಶಾಸಕರು ತಿಳಿಸಿದ್ದಾರೆ.

Leave A Reply

Your email address will not be published.