ಗುರುವಾಯನಕೆರೆ | ಕೆಲಸಕ್ಕಿದ್ದ ಅಂಗಡಿಗೆ ಕನ್ನ , ಹಾಡುಹಗಲೇ ಕಳ್ಳನಿಗೆ ಬಿತ್ತು ಗುನ್ನ !

ಬೆಳ್ತಂಗಡಿ : ಗುರುವಾಯನಕೆರೆಯ ಉಪ್ಪಿನಂಗಡಿ ರಸ್ತೆ ಬಳಿಯ ಫ್ಯಾಬ್ರಿಕೇಶನ್ ಸಾಮಾಗ್ರಿಗಳ ಮಾರಾಟ ಅಂಗಡಿ ವಿನಾಯಕ ಏಜನ್ಸಿ ಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆಸುತ್ತಿದ್ದ ಹುಡುಗನನ್ನು ಹಿಡಿಯಲಾಗಿದೆ.

ಆ ಹುಡುಗ ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದ. ಯುವಕನ ಸಹಿತ ಮೂವರು ರೆಡ್ ಹ್ಯಾಂಡ್ ಆಗಿ ಸಾವ೯ಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ಎ.25ರಂದು ನೆಡೆದಿದೆ.

ಗುರುವಾಯನಕೆರೆ ಸಹಕಾರಿ ಸಂಘದ ಬಳಿ ಇರುವ ಸಂತೋಷ್ ಎಂಬವರ ಮಾಲಕತ್ವದ ಈ ಕಟ್ಟಡಕ್ಕೆ ರಾತ್ರಿ ಕಾವಲುಗಾರನಿದ್ದು, ಬೆಳಗ್ಗೆ 6 ಗಂಟೆಗೆ ಆತ ಕೆಲಸ ಮುಗಿಸಿ ಹೋದ ಬಳಿಕ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು.

ಕಳೆದ ಮೂರು ತಿಂಗಳಿಂದ ಈ ರೀತಿ ಹಗಲು ಹೊತ್ತಿನಲ್ಲಿ ಕಳ್ಳತನ ಮಾಡುತ್ತಿದ್ದರೆಂದು ಹೇಳಲಾಗುತ್ತಿದ್ದು, ಸಾರ್ವಜನಿಕರು ಕಳ್ಳರನ್ನು ಹಿಡಿದು ಚೆನ್ನಾಗಿ ತದುಕಿದ್ದಾರೆ ಮತ್ತು ಪೊಲೀಸರ ವಶಕ್ಕೆ ನೀಡಿದ್ದಾರೆ.

Leave A Reply

Your email address will not be published.