ನಿಶ್ಚಿತಾರ್ಥ ಮಾಡಿಕೊಂಡ ವಿದ್ಯಾಶ್ರೀ, ಇರ್ಷಾದ್ ಜೊತೆಗೆ ಪರಾರಿ | ಆನಂತರ ನಡೆದದ್ದು ದುರಂತ !

ಇರ್ಷಾದ್ ಮತ್ತು ವಿದ್ಯಾಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಅಂತರ್ಧರ್ಮೀಯ ಮದುವೆಗೆ ಆಕೆಯ ಪ್ರೀತಿಗೆ ಅಡ್ಡಿಯಾಗಿ ಮನೆಯವರು ನಿಂತಿದ್ದರು. ಆಕೆಯನ್ನು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು ಮನೆಯವರು.

ನಿಶ್ಚಿತಾರ್ಥವಾದ ಬೆನ್ನೆಲ್ಲೆ ಅವರಿಬ್ಬರೂ ಮನೆ ಬಿಟ್ಟು ದೂರ ಓಡಿ ಹೋಗಿದ್ದರು. ಬೆನ್ನಲ್ಲೇ ಮನನೊಂದ ಯುವತಿ ತನ್ನ ಪ್ರಿಯತಮನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ನಾಗನೂರು ಗ್ರಾಮದಲ್ಲಿ ನಡೆದಿದೆ.

ಇರ್ಷಾದ್ (23) ಹಾಗೂ ವಿದ್ಯಾಶ್ರೀ (22) ಮೃತ ದುರ್ದೈವಿಗಳು, ವಿದ್ಯಾಶ್ರೀ ಹಾಗೂ ಇರ್ಷಾದ್ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವರ ವಿರೋಧವಿತ್ತು. ಇದೇ ವೇಳೆ ಎಲ್ಲರೂ ಸೇರಿ ಬೇರೊವಿದ್ಯಾಶ್ರೀ ನಿಶ್ಚಿತಾರ್ಥ ನೆರವೇರಿಸಿದ್ದರು.

ಇದರಿಂದ ಬೇಸರಗೊಂಡ ಯುವತಿ ನಿಶ್ಚಿತಾರ್ಥ ಮುಗಿದ ಬೆನ್ನಲ್ಲೇ ಇರ್ಷಾದ್ ಜೊತೆ ಕಾಣೆಯಾಗಿದ್ದಾಳೆ. ಮಗಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದೀಗ ಇರ್ಷಾದ್ ಹಾಗೂ ವಿದ್ಯಾಶ್ರೀ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು ಎನ್ನಲಾಗಿದೆ. ಈಗ ಇರ್ಷಾದ್ ಜಮೀನಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.