ಬೆಳ್ತಂಗಡಿ ತಾಲೂಕಿನ ಸಂಚಾರಿ ಪೊಲೀಸ್ ರಿಂದ ಗೃಹರಕ್ಷಕ ಸಿಬ್ಬಂದಿ ಮಗಳ ಚಿಕಿತ್ಸೆಗೆ ಧನ ಸಹಾಯ

ಬೆಳ್ತಂಗಡಿ ತಾಲೂಕಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಗೃಹರಕ್ಷಕ ಸಿಬಂದಿ ಪಣೆಕಜೆಯ ಭಾಸ್ಕರ ಪೂಜಾರಿ ಅವರ ಮಗಳಾದ ಪವಿತ್ರಾ ಬಿ.(18ವ) ಅವರು ಮಿದುಳಿನ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಆಕೆಯ ಚಿಕಿತ್ಸೆಗಾಗಿ ಬೆಳ್ತಂಗಡಿ ಸಂಚಾರಿ ಠಾಣೆ ಸಿಬಂದಿ ವತಿಯಿಂದ 29,೦೦೦ ರೂಪಾಯಿ ಆರ್ಥಿಕ ಸಹಾಯ ಸಂಗ್ರಹಿಸಲಾಯಿತು.

ಪವಿತ್ರಾ ಅವರ ಮಿದುಳಿನ ರಕ್ತನಾಳದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಒಟ್ಟುಗೂಡಿಸಿದ ಮೊತ್ತವನ್ನು ಆಕೆಯ ತಂದೆ ಭಾಸ್ಕರ ಪೂಜಾರಿ ಅವರಿಗೆ ಸಂಚಾರಿ ಠಾಣೆ ಉಪ ನಿರೀಕ್ಷಕ ಓಡಿಯಪ್ಪ ಗೌಡ ಅವರು ಹಸ್ತಾಂತರಿಸಿದರು.

ಆಕೆಯ ಆರೋಗ್ಯ ಪರಿಸ್ಥಿತಿ ಮನಗಂಡು ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ವಸಂತ ಬಂಗೇರ ಅವರು ತಲಾ ರೂ. 1೦,೦೦೦ ಧನ ಸಹಾಯ ಒದಗಿಸಿರುವುದಾಗಿ ಬೆಳ್ತಂಗಡಿ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ತಿಳಿಸಿದ್ದಾರೆ.

Leave A Reply

Your email address will not be published.