ಜೋಡುಪಾಲ ಸಮೀಪ ರಸ್ತೆ ಕುಸಿತ | ಘನ ವಾಹನ ಸಂಚಾರಕ್ಕೆ ನಿಷೇಧ

ಮಾಣಿ – ಮೈಸೂರು ರಾಷ್ಟ್ರಿಯ ಹೆದ್ದಾರಿ 275 ಜೋಡುಪಾಲ ಸಮೀಪ ರಸ್ತೆ ಕುಸಿದಿದೆ. ಇದರಿಂದಾಗಿ ಈ ರಸ್ತೆ ಮೂಲಕ ಸಂಚಾರಿಸುವ ಘನ ವಾಹನಗಳನ್ನು ತಡೆಹಿಡಿಯಲಾಗುತ್ತಿದೆ. ಕಳೆದ ವರ್ಷ ಮಳೆಗಾಲ ಸಂದರ್ಭ ಜೋಡುಪಾಲ ಜಂಕ್ಷನ್ ಸಮೀಪ ರಸ್ತೆ ಕೆಳ ಭಾಗ ಕುಸಿದಿತ್ತು. ಬಳಿಕ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು.

ಇತ್ತಿಚೆಗೆ ರಸ್ತೆ ದುರಸ್ತಿ ಮಾಡುವ ಕೆಲಸ ಪ್ರಾರಂಭಿಸಲಾಗಿತ್ತು. ಅಲ್ಲದೆ ಕೆಲವು ದಿನಗಳಿಂದ ಈ ಭಾಗದಲ್ಲಿ ಮಳೆ ಸುರಿದಿತ್ತು. ಇದರಿಂದ ರಸ್ತೆ ಶನಿವಾರ ಬಿರುಕು ಬಿಟ್ಟು ಕುಸಿದಿತ್ತು.ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಘನ ವಾಹ‌ನಗಳ ಸಂಚಾರವನ್ನು ನಿರ್ಭಂಧಿಸಿ ಆದೇಶ ಹೊರಡಿಸಿದೆ. ಈ ಕಾರಣದಿಂದ ಘನ ವಾಹನಗಳನ್ನು ಸಂಪಾಜೆ ಗೇಟ್ ನಲ್ಲಿ ತಡೆಯಲಾಗುತ್ತಿದೆ.

Leave A Reply

Your email address will not be published.