ಶಿರಾಡಿ | ಕಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಮರಕ್ಕೆ ಡಿಕ್ಕಿ | ಚಾಲಕ ಸ್ಥಳದಲ್ಲೇ ಸಾವು

ನೆಲ್ಯಾಡಿ : ಶಿರಾಡಿ ಗ್ರಾಮದ ಕೊಡ್ಡೆಕಲ್ ಎಂಬಲ್ಲಿ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದು ಮರಕ್ಕೆ ಡಿಕ್ಕಿಿ ಹೊಡೆದಿದೆ.

ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರುಗಳನ್ನು ಸಾಗಿಸುವ ಕಂಟೇನರ್ ಲಾರಿ ಇದಾಗಿದೆ.

ಕಮರಿಗೆ ಉರುಳಿದ ಲಾರಿಯ ಕ್ಯಾಬಿನ್ ಮರಕ್ಕೆ ಡಿಕ್ಕಿ ಹೊಡೆದಿದರಿಂದ ಡ್ರೈವರ್ ಸೈಡ್ ಕ್ಯಾಬಿನ್ ಪೂರ್ತಿ ನಜ್ಜುಗುಜ್ಜಾಗಿದೆ. ಅದರೊಳಗೆ ಚಾಲಕ ಸಿಲುಕಿಕೊಂಡು ಮೃತಪಟ್ಟಿದ್ದಾನೆ.

ಈ ಅವಘಡ ಮಧ್ಯರಾತ್ರಿ 2.30 ಗೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಿಂದ ಮೃತಪಟ್ಟ ಚಾಲಕನನ್ನು ಜಾರ್ಖಂಡ್ ಮೂಲದ ನುಸ್ರಲ್ಲಾಖಾನ್ (31 ವರ್ಷ ) ಎಂದು ಗುರುತಿಸಲಾಗಿದೆ.

Leave A Reply

Your email address will not be published.