ಹಠಾತ್ ಚಲಿಸಿತು ನಿಲ್ಲಿಸಿದ್ದ ತ್ಯಾಜ್ಯ ವಿಲೇವಾರಿ ಲಾರಿ | ಕೋಳಿ ಅಂಗಡಿ, ವಾಹನಗಳಿಗೆ ಡಿಕ್ಕಿಯಾಗಿ ಅಪಾರ ಹಾನಿ

ಮಂಗಳೂರಿನ ಕಂಕನಾಡಿ ಮಾರುಕಟ್ಟೆಯ ಬಳಿ ನಿಂತಿದ್ದ ಲಾರಿಯೊಂದು ಹಠಾತ್ ಚಲಿಸಿದ ಪರಿಣಾಮ ಕೋಳಿ ಅಂಗಡಿ ಹಾಗೂ ವಾಹನಗಳಿಗೆ ಹಾನಿಯಾದ ಬಗ್ಗೆ ಗುರುವಾರ ವರದಿಯಾಗಿದೆ.

ಆ್ಯಂಟನಿ ಕಂಪೆನಿಗೆ ಸೇರಿದ ಈ ತ್ಯಾಜ್ಯ ವಿಲೇವಾರಿ ಲಾರಿಯನ್ನು ಚಾಲಕ ನಿಲ್ಲಿಸಿ ಸ್ವಲ್ಪ ದೂರ ಹೋಗಿದ್ದು, ಈ ಸಂದರ್ಭ ಲಾರಿಯು ಏಕಾಏಕಿ ಚಲಿಸಿ ಮೂರು ಕಾರು, ಎರಡು ದ್ವಿಚಕ್ರ ವಾಹನ, ಒಂದು ಟೆಂಪೋಗೆ ಢಿಕ್ಕಿ ಹೊಡೆದಿದೆ. ಅಲ್ಲದೆ ಸಮೀಪದ ಕೋಳಿ ಅಂಗಡಿಗೂ ಢಿಕ್ಕಿ ಹೊಡೆದಿದೆ‌.

ಇದರಿಂದ ಒಂದು ದ್ವಿಚಕ್ರ ವಾಹನ ಅಪ್ಪಚ್ಚಿಯಾದರೆ ಕೋಳಿ ಅಂಗಡಿಯ ಜನರೇಟರ್‌ಗೆ ಹಾನಿಯಾಗಿದೆ. ಅಲ್ಲೇ ಇದ್ದ ಚಾಲಕ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಲಾರಿ ಚಾಲಕ ಸ್ಥಳಕ್ಕೆ ಆಗಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದು, ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.