? ಧರ್ಮಸ್ಥಳ | ದಕ್ಷಿಣದ ಅಯೋಧ್ಯೆಯಲ್ಲಿ ಇಂದು ಮಹಾ ಬ್ರಹ್ಮರಥೋತ್ಸವ ಸಂಭ್ರಮ

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರ, ಧರ್ಮಸ್ಥಳ – ಶ್ರೀ ರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 61ನೇ ವರ್ಷದ ಶ್ರೀ ರಾಮತಾರಕ ಮಂತ್ರ – ಸಪ್ತಾಹ ಸಮಾರಂಭ ನಡೆಯುತ್ತಿದೆ.

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು “ಮಹಾಬ್ರಹ್ಮರಥೋತ್ಸವದ
ತಾ. 21-04-2021ನೇ ಬುಧವಾರ ಗಂಟೆ 6-00 ರಿಂದ ಸುಪ್ರಭಾತ, ವೇದಘೋಷ, ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ, ವಾಗ್ದವಿ ಯಜ್ಞ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ ನಡೆಯಲಿದೆ.

10-30 ಕ್ಕೆ ಮಹಾಸಂಕಲ್ಪ, ಪೂರ್ಣಾಹುತಿ, ಕ್ಷೇತ್ರಾದಿ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮೂರ್ತಿ ಬಲಿ, ಪಾಲಕಿ ಬಲಿ, ಹಗಲು ಉತ್ಸವ ನಡೆಯಲಿದೆ.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಸಾಯಂ. ಗಂ. 7-00 ರಿಂದ ಶ್ರೀ ಬಲಿ, ಭೂತಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ ಮಹಾ ಬ್ರಹ್ಮರಥೋತ್ಸವ,ರಥಾರೋಹಣ ಪೂಜೆ ಮಹೋತ್ಸವ, ಅವಕೃತ ಓಕುಳಿ ಮತ್ತು ಕ್ಷೇತ್ರದ ರಸ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಮತ್ತು ಇತರ ಎಲ್ಲಾ ರೀತಿಯ ಸರಕಾರದ ಕೋವಿಡ್ ನಿಯಮ ಪಾಲನೆಯನ್ನು ಮಾಡಬೇಕಾಗಿ ಸೂಚಿಸಲಾಗಿದೆ.

Leave A Reply

Your email address will not be published.