ಇ0ಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ: ಇಂಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ೨೦೨೮ -೨೨ನೇ ಸಾಲಿನ ಅಧ್ಯಕ್ಷರಾಗಿ ಡಾ.ಸದಾನಂದ ಕುಂದರ್ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ .ಸಿ.ಹೆಚ್. ರವರು ಆಯ್ಕೆಗೊಂಡಿದ್ದಾರೆ.
ಕೋಶಾಧಿಕಾರಿಯಾಗಿ ಅರ್. ವೆಂಕಟರಮಣ, ಉಪಾಧ್ಯಕ್ಷ ರಾಗಿ ರವೀಂದ್ರ.ಟಿ, ಗಣೇಶ್. ಕೆ.ರಶ್ಮಿ, ಜಯಾನಂದ‌ ಬಂಟ್ರಿಯಾಲ್, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್.ಕೆ.ವ್ಯ, ಮೋಹನ್ ಕುಮಾರ್‌.ಡಿ, ಚಂದ್ರಶೇಖರ ಬಾಣಜಾಲು, ಜಾನ್ ಪಿ.ಎಸ್, ಸದಸ್ಯರುಗಳಾಗಿ ಡಾ.ಮುರಳೀಧರ, ಪುರಂದರ ಗೌಡ.ಡಿ, ಉಲಹನನ್.ಪಿ.ಎಂ, ವಿ.ಅರ್.ಹೆಗ್ಡೆ, ಆನಂದ ಅಜಿಲ, ರವಿಚಂದ್ರ ಹೊಸವೊಕ್ಲು, ಮೇರಿ‌ಜಾನ್ ರವರು ಆಯ್ಕೆಗೊಂಡಿದ್ದಾರೆ.

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ರವರು ಸ್ಧಾಪಕಾಧ್ಯಕ್ಷರಾಗಿದ್ದಾರೆ.

ಎ. ೨೧ ಪದಗ್ರಹಣ ಸಮಾರಂಭ

ನೂತನ ಘಟಕದ ಪದಗ್ರಹಣ ಸಮಾರಂಭ ಎ.೨೧ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಧೆಯ ಸಭಾಂಗಣದಲ್ಲಿ ನಡೆಯಲಿದೆ.

ನೂತನ ಅಧ್ಯಕ್ಷ ಡಾ. ಸದಾನಂದ ಕುಂದರ್, ಕಾರ್ಯದರ್ಶಿ ಪ್ರಶಾಂತ ಸಿ.ಹೆಚ್ ರವರು ಪದಸ್ವೀಕಾರ ಮಾಡಲಿದ್ದಾರೆ. ಇಂಡಿಯನ್ ಸೀನಿಯರ್ ಛೇಂಬರ್ ನ ನೂತನ ಅಧ್ಯಕ್ಷ ಡಾ. ಅರವಿಂದ ರಾವ್ ಕೇದಿಗೆ, ರಾಷ್ಟ್ರೀಯ ನಿರ್ದೇಶಕ ಚೈತ್ರಾ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ರಾಷ್ಟ್ರೀಯ ಉಪಾಧ್ಯಕ್ಷ ಸುನಿಲ್ ಜೈನ್ ಪದಗ್ರಹಣ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.