ಬೆಳ್ತಂಗಡಿ | ಅಮ್ಮನಿಗೆ ಹುಷಾರಿಲ್ಲದ ಸಮಯವೇ ಮನೆ ಬಿಟ್ಟು ಹೋದ ಶಾಲಾ ಬಾಲಕಿ !

ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ.

ಆಕೆ ಮೇಲಂತಬೆಟ್ಟು ಗ್ರಾಮದ ಗೋಳಿದಪ ನಿವಾಸಿ ಸಂಜೀವರವರ ಪುತ್ರಿ ಕು| ಶರಣ್ಯ (15 ವ.) ಆಗಿದ್ದು ನಿನ್ನೆಯಿಂದ ಕಾಣೆಯಾಗಿದ್ದಾಳೆ.

ಮನೆಯಿಂದ ಶಾಲೆಗೆ ಹೋಗಿ ಪುಸ್ತಕ ತಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಮರಳಿ ಬಂದಿಲ್ಲ.

ಬಾಲಕಿ ಶರಣ್ಯಾಳ ತಾಯಿ ಸರಿತಾರವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಿದ್ದು ಕೈಗೆ ಗಾಯವಾಗಿತ್ತು. ತಾಯಿ ಚಿಕಿತ್ಸೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಹೋದ ಸಮಯ ಪುತ್ರಿ ಶರಣ್ಯ ಮನೆಬಿಟ್ಟು ಹೋದದ್ದು ಆಶ್ಚರ್ಯ ಮೂಡಿಸಿದೆ. ಹಾಗೆ ಪುಸ್ತಕ ತರಲು ಎಂದು ಹೋದವಳು ಮರಳಿ ಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.