ಬೆಳ್ತಂಗಡಿ ನಾಗಬನದಲ್ಲಿ ಪೂಜೆ ಮಾಡುತ್ತಿದ್ದಾಗ ಕಣಜದ ಹುಳು ದಾಳಿ | 8 ಮಂದಿ ಗಂಭೀರ

ಬೆಳ್ತಂಗಡಿ ತಾಲೂಕಿನ ನಾವೂರು ಅರುವಾಲು ನಿವಾಸಿ ಕುಂಞಪ್ಪ ಮೂಲ್ಯ ರವರ  ಮನೆಯ ಸಮೀಪವಿರುವ ನಾಗಬನದಲ್ಲಿ  ಶ್ರೀ ನಾಗದೇವರ ಪೂಜೆ ನಡೆಯುತ್ತಿರುವ ವೇಳೆ ಕಣಜದ ಹುಳುಗಳು ಧಿಡೀರ್ ದಾಳಿ ಮಾಡಿದ್ದು, ಕಾರ್ಯಕ್ರಮದಲ್ಲಿ ನೆರೆದ ಹಲವರಿಗೆ ಗಂಭೀರ ಗಾಯಗಳಾದ ಘಟನೆ ಎ.20 ರಂದು ನಡೆದಿದೆ.

  ಪೂಜೆ ನಡೆಯುತ್ತಿದ್ದಾಗ ಪೂಜೆಯ ಮಾಡುತ್ತಿದ್ದ ಹೊಗೆ ಜೇನು ಗೂಡಿಗೆ ಹೋಗಿದ್ದು ಈ ವೇಳೆ ಸ್ಥಳದಲ್ಲಿದ್ದ ಸುಮಾರು 25 ಜನರಿಗೆ ಹೆಜ್ಜೆನು ದಾಳಿ ಮಾಡಿದೆ.

ಇದರಲ್ಲಿ ಉಮೇಶ್(40), ರಾಧ(35), ವಿನೀತ್(15) , ಕುನ್ಯಪ್ಪ(70),ಕಮಲ(55), ರತ್ನಕರ(50),ಭಾರತಿ(45), ಶೀನ(40) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

Leave A Reply

Your email address will not be published.