ಬೆಳ್ತಂಗಡಿ | ಭೀಕರ ರಸ್ತೆ ಅಪಘಾತ, ಮುಂಡಾಜೆಯ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಮುಂಡಾಜೆ : ಮುಂಡಾಜೆಯ ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾದ ಘಟನೆ ಇದೀಗ ನಡೆದಿದೆ.

ಬೈಕ್ ಮತ್ತು ಪಿಕಪ್ ನಡುವೆ ನಡೆದ ಮುಖಾ-ಮುಖಿ ಡಿಕ್ಕಿ ಇದಾಗಿದ್ದು ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಆತ ಕೂಡ ಸಾವನ್ನಪ್ಪಿದ್ದಾನೆ.

ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯು ಮುಂಡಾಜೆ ಸ್ವೀಟ್ ಬಳಿ ನಡೆದಿದೆ. ಇಲ್ಲಿನ
ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಶೇಖರ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ ಎಂಬವರೇ ಮೃತಪಟ್ಟ ದುರ್ದೈವಿ ಎನ್ನಲಾಗಿದೆ.

ಬೈಕಿನಲ್ಲಿ ಸಹಸವಾರ ಕೂಡ ಇದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ

ಈಗ ಸತ್ತ ಸಹ ಸವಾರನನ್ನು ಉಜಿರೆ ಗ್ರಾಮದ ಮುಂಡತ್ತೋಡಿಯ ಪ್ರಶಾಂತ್ ಪೂಜಾರಿ ಎಂದು ಗುರುತಿಸಲಾಗಿದೆ.

Leave A Reply

Your email address will not be published.