ಪಂಜ | ಮೂಲಸ್ಥಾನ ಗರಡಿಬೈಲಿನಲ್ಲಿರುವ ನಾಗನ ಕಟ್ಟೆಗೆ ಮರಬಿದ್ದು ಹಾನಿ

ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಮೂಲಸ್ಥಾನ ಗರಡಿಬೈಲಿನಲ್ಲಿರುವ ನಾಗನ ಕಟ್ಟೆಗೆ ಮರ ಬಿದ್ದು ಹಾನಿಯಾಗಿದೆ.

ನಿನ್ನೆ ಸಂಜೆಯಿಂದ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ ಈ ಮರ ಮುರಿದು ಬಿದ್ದಿದ್ದು, ನಾಗನ ಕಟ್ಟೆಗೆ ಸಂಪೂರ್ಣ ಹಾನಿಯಾಗಿದೆ. ಈ ನಾಗನ ಕಟ್ಟೆಯನ್ನು ಒಂದು ವರ್ಷದ ಮೊದಲು ಜೀರ್ಣೋದ್ದಾರಗೊಳಿಸಲಾಗಿತ್ತು.

ಇದರ ತೆರವು ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

Leave A Reply

Your email address will not be published.