ಮೀನುಗಾರಿಕೆಯ ವೇಳೆ ಸಿಡಿಲಿನ ಆಘಾತ‌ ,ಮೀನುಗಾರ ಮೃತ್ಯು

ಮೀನುಗಾರಿಕೆಯ ವೇಳೆ ಸಿಡಿಲು ಬಡಿದು ಮೀನುಗಾರರೋಬ್ಬರು ಸಾವಿಗೀಡಾದ ಘಟನೆ ಮಂಗಳವಾರ ಮುಂಜಾನೆ ಕಾಸರಗೋಡು ಸಮುದ್ರದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಅಡ್ಕತ್ತಬೈಲ್ ಶ್ರೀ ಕ್ಷೇತ್ರ ಕುರುಂಭ ಸಮೀಪದ ಬಾಬು ರಾಜ್ (40) ಎಂದು ಗುರುತಿಸಲಾಗಿದೆ.

ಬಾಬು ರಾಜ್ ಜೊತೆಗಿದ್ದ ಕೃಷ್ಣ ಎಂಬವರು ಗಾಯಗೊಂಡಿದ್ದಾರೆ.

ಮುಂಜಾನೆ ಮೂರು ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬಾಬು ರಾಜ್, ಕೃಷ್ಣ, ಸುಜಿ ಮತ್ತು ಬಾಬು ಎಂಬವರು ಭಾಗ್ಯಲಕ್ಷ್ಮಿ ಎಂಬ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು.

ಬೋಟು ಅಳಿವೆ ಬಾಗಿಲು ತಲುಪುತ್ತಿದ್ದಂತೆ ಭಾರೀ ಗಾಳಿ, ಮಳೆ ಜೊತೆ ಮಿಂಚಿನ ಆರ್ಭಟ ಪ್ರಾರಂಭವಾಗಿತ್ತು. ಈ ವೇಳೆ ಸಿಡಿಲು ಬಡಿದು ಬಾಬು ರಾಜ್ ಮೃತಪಟ್ಟಿದ್ದಾರೆ.

Leave A Reply

Your email address will not be published.