ಗ್ರಾ.ಪಂ. ಗೆ ನಾಮನಿರ್ದೇಶಿತ ಸಮಿತಿ ನೇಮಕ ಮಾಡಿದರೆ ಪ್ರತಿಭಟನೆ – ಶಕುಂತಳಾ ಶೆಟ್ಟಿ

ಪುತ್ತೂರು: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧಿಕಾರವಧಿ ಅಂತ್ಯವಾಗಿದ್ದು ಸರಕಾರ ಮುಂದಕ್ಕೆ ನಾಮ ನಿರ್ದೇಶಿತ ಸಮಿತಿಯನ್ನು ನೇಮಕ ಮಾಡುವ ತಿರ್ಮಾನ ಕೈಗೊಂಡಿದ್ದು ಇದಕ್ಕೆ ಕಾಂಗ್ರೆಸ್ ತೀರ್ವ ವಿರೋಧ ವ್ಯಕ್ತಪಡಿಸುತ್ತದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಮೇ.20ರಂದು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಸರಕಾರ ಗ್ರಾಮ ಪಂಚಾಯತ್ ಅಧಿಕಾರ ಅಂತ್ಯವಾಗಿರುವುದರಿಂದ ಅದೇ ಸಮಿತಿಯನ್ನು ಮುಂದುವರಿಸಬೇಕು ಇಲ್ಲವೇ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಯಾವ ಕಾರಣಕ್ಕೂ ನಾಮ ನಿರ್ದೇಶಿತ ಸಮಿತಿಯನ್ನು ನೇಮಿಸಬಾರದು. ಒಂದು ವೇಳೆ ನಾಮ ನಿರ್ದೇಶಿತರನ್ನು ನೇಮಿಸಿದ್ದಲ್ಲಿ ಸರಕಾರ ಕಾಂಗ್ರೆಸ್ ನ ಮನವಿಗೂ ಸ್ಪಂಧಿಸದೇ ಇದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.

Leave A Reply

Your email address will not be published.