ಧರ್ಮಸ್ಥಳದ ನಾರ್ಯದಲ್ಲಿ ಕಂಟ್ರಿ ಸಾರಾಯಿ ಕುಡಿದು ತಲ್ವಾರಿನಿಂದ ಹತ್ಯಾ ಪ್ರಯತ್ನ | ಹಲ್ಲೆಗೊಳಗಾದವನ ಸ್ಥಿತಿ ಗಂಭೀರ

ಧರ್ಮಸ್ಥಳ : ಕುಡಿದ ಮತ್ತಿನಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ನಾರ್ಯ ದಲ್ಲಿ ನಡೆದಿದೆ.

ಸ್ಥಳೀಯರಾದ ಲೋಕೇಶ್ ಎಂಬವ ಸುರೇಶ್ ಎಂಬವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕವಾದ ದಾಳಿ ನಡೆಸಿದ್ದಾನೆ. ಹಲ್ಲೆಗೊಳಗಾದ ಸುರೇಶ್ ಸ್ಥಿತಿ ಗಂಭೀರವಾಗಿದೆ.

ಲೋಕೇಶ್ ಎಂಬಾತ ಅಕ್ರಮವಾಗಿ ಮದ್ಯ ತಯಾರಿಸಿ ಮಾರಾಟ ನಡೆಸುತ್ತಿದ್ದ. ಇದರ ಬಗ್ಗೆ ಲೋಕೇಶ್ ಮತ್ತು ಸುರೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಮದ್ಯ ತಯಾರಿಸಿ ಊರಿನವರನ್ನು ಕೆಟ್ಟ ದಾರಿಗೆ ಎಳೆಯಬೇಡ ಎಂದು ಸುರೇಶ್ ಎಚ್ಚರಿಕೆ ನೀಡಿದ್ದರು. ಅದು ಸುರೇಶ್ ಜೊತೆ ಲೋಕೇಶ್ ಗೆ ದ್ವೇಷ ಹುಟ್ಟಲು ಕಾರಣವಾಗಿತ್ತು.

ನಿನ್ನೆ ಸಂಜೆ ಲೋಕೇಶ್ ಕಂಠಮಟ್ಟ ಕುಡಿದು ಬಂದಿದ್ದ. ಹಾಗೆ ಬಂದು ಏಕಾಏಕಿ ಸುರೇಶ್ ಮೇಲೆ ತಲ್ವಾರಿನಿಂದ ದಾಳಿ ನಡೆಸಿದ್ದಾನೆ.

ಇದೀಗ ಸುರೇಶ್ ಸ್ಥಿತಿ ಗಂಭೀರವಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮಸ್ಥಳದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.