ಅಂತರ್ ರಾಜ್ಯ ಪ್ರಯಾಣಕ್ಕೆ ಸೇವಾ ಸಿಂಧು ಮೂಲಕ ಹೆಸರು ನೋಂದಾಯಿಸಲು ಸೂಚನೆ
ಬೆಂಗಳೂರು : ಮೇ.17 ರವರೆಗೆ ಲಾಕ್ಡೌನ್ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಆರೆಂಜ್ ಹಾಗೂ ಗ್ರೀನ್ ಝೋನ್ನಲ್ಲಿ ಕೆಲವೊಂದು ನಿಯಮಾವಳಿಗಳನ್ನು ಸಡಿಲಿಸಿದೆ.
ಇದರಲ್ಲಿ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಸುವ ವಲಸೆ ಕಾರ್ಮಿಕರು/ಪ್ರವಾಸಿಗರು/ವಿದ್ಯಾರ್ಥಿಗಳು ತಾವು ಸ್ವಂತ ಊರಿಗೆ ಪ್ರಯಾಣಿಸ ಬೇಕಾದಲ್ಲಿ ಸೇವಾ ಸಿಂಧು ಮೂಲಕ ಹೆಸರು ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
https://sevasindhu.karnataka.gov.in