ಕೊರೊನಾ ವಿರುದ್ಧದ ಹೋರಾಟಕ್ಕೆ ಶ್ರವಣಬೆಳಗೊಳ ಮಠದಿಂದ 10ಲಕ್ಷ ರೂ. ನೆರವು

ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಸನದ ಶ್ರವಣಬೆಳಗೊಳ ಮಠ ರೂ . 10 ಲಕ್ಷ ನೆರವು ನೀಡಿದೆ.

ಶ್ರೀ ಕ್ಷೇತ್ರದ ವತಿಯಿಂದ ಕೋವಿಡ್-19 ಸಿಎಂ ಪರಿಹಾರ ನಿಧಿಗೆ 10 ಲಕ್ಷರೂ‌ ದೇಣಿಗೆಯನ್ನು ಕ್ಷೇತ್ರದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಕೊರೊನಾ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡಲು ಸರಕಾರ ಕ್ಕೆ ನೀಡಿದ್ದಾರೆ.

ಕೊರೊನಾ ಸೋಂಕು ತಡೆಗೆ ಇಡೀ ‌ದೇಶವ್ಯಾಪಿ‌ ಲಾಕ್ ಡೌನ್ ಆದೇಶ ಮಾಡಿರುವ ಪ್ರಧಾನಿ ಮೋದಿ‌ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸಂತ್ರಸ್ತರ ಪರ ನಿಲ್ಲಬೇಕಿರುವುದು ಪ್ರತಿಯೊಬ್ಬರ ಮಾನವೀಯ ಕರ್ತವ್ಯ ಎಂದು ಶ್ರೀಗಳ ಅಭಿಪ್ರಾಯ ಪಟ್ಟಿದ್ದಾರೆ.

Leave A Reply

Your email address will not be published.