ಶ್ರೀ ಮಹಿಷ ಮರ್ಧಿನಿ ಯುವಕ ಮಂಡಲ ಮೂಡಂಬೈಲು ಹಾಗೂ ಫ್ರೆಂಡ್ಸ್ ಬಳಂತಿಮುಗೇರು ವತಿಯಿಂದ ಅಶಕ್ತ 60 ಮನೆಗಳಿಗೆ ಅಗತ್ಯ ಆಹಾರ ಪೂರೈಕೆ

ಪುಣಚ ಗ್ರಾಮದ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೂಡಂಬೈಲಿನಲ್ಲಿ ‘ಮೂಡಂಬೈಲು ಯುವಕ ಮಂಡಲ ಹಾಗೂ ಫ್ರೆಂಡ್ಸ್ ಬಳಂತಿಮುಗೇರು ಇವರು ಅಶಕ್ತರಿಗೆ ಊಟದ ವ್ಯವಸ್ಥೆಯ ಅಳಿಲು ಸೇವೆಗೆ ಮುಂದಾಗಿದ್ದಾರೆ.

ಅಳಿಲುಸೇವೆ ಅಂದುಕೊಂಡು ಹೊರಟದ್ದು, ಹೋಗುತ್ತಾ ಹೋಗುತ್ತಾ ದೊಡ್ಡ ಮಟ್ಟಿನ ನೆರವಿಗೆ ಕಾರಣವಾಗಿದೆ. ಶ್ರೀ ಮಹಿಷ ಮರ್ಧಿನಿ ಯುವಕಮಂಡಲ, ಮೂಡಂಬೈಲು ಮತ್ತು ಊರಿನ ದಾನಿಗಳು ಅಕ್ಕಿ, ತೊಗರಿಬೇಳೆ, ಬೆಲ್ಲ, ಚಾ ಹುಡಿ, ಉಪ್ಪು, ಸಾಂಬಾರ್ ಪುಡಿ ಮುಂತಾದ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಕೊರೋನಾದ ಲಾಕ್ ಡೌನ್ ಅಶಕ್ತರಿಗೆ ಊಟದ ವ್ಯವಸ್ಥೆಯ ಸಹಾಯ ಹಸ್ತ ಚಾಚಲಾಯಿತು.

ವಿಶೇಷವೆಂದರೆ, ಹತ್ತಾರು ಮನೆಗಳಿಗೆ ಸಹಾಯ ಮಾಡೋಣ ಅಂದುಕೊಂಡದ್ದು , ಒಂದೇ ದಿನದಲ್ಲಿ 60 ಮನೆಗಳಿಗೆ ಅಗತ್ಯವಸ್ತುಗಳ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುವಕಮಂಡಲದ ಅಧ್ಯಕ್ಷರು, ಸದಸ್ಯರು ಮತ್ತು ಹಾಜರಿದ್ದರು.

Leave A Reply

Your email address will not be published.