ಕೊರೊನಾ ಜಾಗೃತಿ | ಶಾಸಕ ಹರೀಶ್ ಪೂಂಜ ಮನವಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ಕೊರೊನಾ ಜಾಗೃತಿ ಗಾಗಿ ಮನವಿ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾರಾದರೂ ಇತ್ತೀಚೆಗೆ ವಿದೇಶದಿಂದ ಹಿಂದುರಿಗಿದವರು, ಕ್ವಾರಂಟೈನ್ ಸೀಲ್ ಕೈಗೆ ಹಾಕಿಸಿಕೊಂಡು ಸುತ್ತಾಡುತ್ತಿರುವ ಬಗ್ಗೆ ಸುಳಿವಿದ್ದರೆ ದಯವಿಟ್ಟು ನನ್ನ ವಾಟ್ಸ್ ಅಪ್ ಸಂಖ್ಯೆ 9900300042 ಗೆ ಮಾಹಿತಿ ನೀಡಿ. ಮಾಹಿತಿ ಸ್ಪಷ್ಟವಾಗಿ ಇರಲಿ, ಎಲ್ಲಿ, ಯಾರು ಮತ್ತು ಅವರ ನೆರೆಹೊರೆಯವರ ವಿಳಾಸ ಸ್ಪಷ್ಟವಾಗಿರಲಿ. ವಾಟ್ಸ್ ಅಪ್ ಫಾರವಾರ್ಡ್ ದಯವಿಟ್ಟು ಬೇಡ, ಮಾಹಿತಿದಾರರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಗುಪ್ತವಾಗಿ ಇಡಲಾಗುವುದು. ಜಾಗರೂಕ ಸಮಾಜ ಜವಾಬ್ದಾರಿಯುತ ಪ್ರಜೆಗಳು…

-ಹರೀಶ್ ಪೂಂಜ
Leave A Reply

Your email address will not be published.