ಬೆಂಕಿ ಅವಘಡದಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ | ಕಡೇಶಿವಾಲಯ ಯುವಶಕ್ತಿಯಿಂದ 1 ಲಕ್ಷ 65 ಸಾವಿರ ನೆರವು

ಬಂಟ್ವಾಳ: ಬೆಂಕಿ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹರಿಣಾಕ್ಷಿ ಎಂಬವರ ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯದ ನೇತೃತ್ವದಲ್ಲಿ ಊರಪರವೂರ ದಾನಿಗಳ ನೆರವಿನಿಂದ ಸಂಗ್ರಹಿಸಲ್ಪಟ್ಟ ಒಂದು ಲಕ್ಷದ ಅರುವತ್ತೈದು ಸಾವಿರ ರೂ ಗಳನ್ನು(₹ 1,65,000)ಗಳನ್ನು ಶ್ರೀರಾಮ ಭಜನಾ ಮಂದಿರದಲ್ಲಿ ಅವರ ಪತಿ ದಿನೇಶ್ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಯುವಶಕ್ತಿ ಕಡೇಶಿವಾಲಯದ ಪದಾಧಿಕಾರಿಗಳು ಹಾಗೂ ಸದಸ್ಯರು.. ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಯುವಶಕ್ತಿಯ ಯೋಜನೆಗೆ ತಕ್ಷಣ ಸ್ಪಂದಿಸಿ ಸದಾ ಸಹಕರಿಸುವ ಎಲ್ಲಾ ಹಿರಿಯರಿಗೆ..ಮಿತ್ರರಿಗೆ..ಹಿತೈಷಿಗಳಿಗೆ ಯುವಶಕ್ತಿ ಕಡೇಶಿವಾಲಯ ಕಾರ್ಯ ವಿಭಾಗ ಹೃದಯಂತರಾಳದ ಕೃತಜ್ಞತೆಯನ್ನು ಸಲ್ಲಿಸಿದೆ.

Leave A Reply

Your email address will not be published.