ಕುದ್ಮಾರು ಶ್ರೀ ಗಣೇಶೋತ್ಸವ ಸಮಿತಿಯಿಂದ ಶಾಂತಿಮೊಗರು ದೇವಸ್ಥಾನಕ್ಕೆ ರೂ 50ಸಾವಿರ ದೇಣಿಗೆ

ಕಾಣಿಯೂರು : ಎಪ್ರಿಲ್‍ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ  ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀಸುಬ್ರಹ್ಮಣ್ಯೇಶ್ವರ  ದೇವಸ್ಥಾನಕ್ಕೆ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ರೂ.50 ಸಾವಿರ  ದೇಣಿಗೆಯನ್ನು ಶ್ರೀ  ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜದೀಪಕ್ ಜೈನ್ ಕುದ್ಮಾರುಗುತ್ತು ಅವರು ವಿತರಿಸಿದರು.

ಈ ಸಂದರ್ಭ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ, ಜತೆ ಕಾರ್ಯದರ್ಶಿ ಭರತ್ ಕುಮಾರ್ ನಡುಮನೆ, ಅರ್ಚಕ ರಮಾನಂದ ಭಟ್ ತೋಟಂತಿಲ, ಬೆಳಂದೂರು ಗ್ರಾ.ಪಂ, ಸದಸ್ಯ ಸಂಜೀವ ಗೌಡ ಕೂರ, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಶಿವಾನಂದ ಕೆಡೆಂಜಿಕಟ್ಟ, ಬಾಲಚಂದ್ರ ನೂಜಿ, ಪದ್ಮನಾಭ ಕೆರೆನಾರು, ಲೋಹಿತ್ ಕೆಡೆಂಜಿಕಟ್ಟ, ಪುನಿತ್ ಹೊಸೊಕ್ಲು ಹಾಗೂ ಪದಾಧಿಕಾರಿಗಳು ,ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಪದಾ„ಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.