ಕರ್ನಾಟಕ- ಕಾಸರಗೋಡು ವಾಹನ ಸಂಚಾರ ಬಂದ್ । ಮಾ. 21 ರಿಂದ ಮಾ. 31 ವರೆಗೆ

ನಾಳೆ ಮಧ್ಯಾಹ್ನ 2 ಗಂಟೆಯಿಂದ ಮಾರ್ಚ್ 31 ರ ಮಧ್ಯರಾತ್ರಿ 12 ರ ವರೆಗೆ ಕೇರಳ ಮತ್ತು ಕರ್ನಾಟಕವನ್ನು ಕಾಸರಗೋಡಿನ ಮೂಲಕ ಜೋಡಿಸುವ ರಸ್ತೆಯನ್ನು ವಾಹನಗಳಿಗೆ ಬಂದ್ ಮಾಡುವ ನಿರ್ದಾರವನ್ನು ಸರಕಾರ ಕೈಗೊಂಡಿದೆ. ದಕ್ಷಿಣ ಕನ್ನಡ ಡಿ ಸಿ ಸಿಂಧೂ ರೂಪೇಶ್ ಅವರು ಈ ಆದೇಶ ಹೊರಡಿಸಿದ್ದಾರೆ.

ಕಾಸರಗೋಡಿನಲ್ಲಿ 6 ಪ್ರಕರಣಗಳು ವರದಿಯಾಗ ಹಿನ್ನೆಲೆಯಲ್ಲಿ ಮತ್ತು ಕಾಸರಗೋಡು ಕರ್ನಾಟಕದ ಮಧ್ಯೆ ಜಾಸ್ತಿ ಟ್ರಾಫಿಕ್ ಓಡಾಡುವ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ 15 ಪ್ರಕರಣಗಳು ರಿಪೋರ್ಟ್ ಆಗಿದ್ದು, ಒಟ್ಟು 2 ಸಾವು ಕರ್ನಾಟಕದಿಂದ ಆಗಿದೆ.

ಹೊಸಕನ್ನಡದ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ

ತುರ್ತು ಸಂದರ್ಭಗಳಲ್ಲಿ ತಲಪಾಡಿ ಚೆಕ್ ಪೋಸ್ಟ್ ಮೂಲಕ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.