ಕುದ್ಮಾರು | ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಂಗಡಿಗೆ ಬೆಂಕಿ | ಬಂಧಿತರಿಗೆ ಜಾಮೀನು

ಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ಲಾ ಎಂಬಾತನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ವಶದಲ್ಲಿದ್ದ ಮೂವರು ಆರೋಪಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

2 ಮದುವೆಯಾಗಿ 6 ಮಕ್ಕಳಿರುವ ಅಬ್ದುಲ್ಲಾ 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು ,ಬಾಲಕಿ ನೀಡಿರುವ ದೂರಿನಂತೆ ಪೊಲೀಸರು ಅಬ್ದುಲ್ಲಾ ಎಂಬಾತನನ್ನು ಫೆ.14ರಂದು ಸಂಜೆ ಬಂಧಿಸಿದ್ದರು.

ಈ ನಡುವೆ ಫೆ.14 ರಂದು ರಾತ್ರಿ ಕುದ್ಮಾರು ರಸ್ತೆ ಬದಿಯಲ್ಲಿದ್ದ ಅಬ್ದುಲ್ಲಾ ನ ಅಂಗಡಿಗೆ ಬೆಂಕಿಹಚ್ಚಿದರಿಂದ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು.

ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಗಳಾದ ಪ್ರವೀಣ್, ಪ್ರದೀಪ್, ಸುಧೀರ್ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ಇದೀಗ ಮೂವರಿಗೆ ಜಾಮೀನು ದೊರಕಿದೆ.

Leave A Reply

Your email address will not be published.