ದರ್ಬೆಯಲ್ಲಿ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಕರೋನಾ ವೈರಸ್ ಅರೋಗ್ಯ ಜಾಥಾ | ಆಯುರ್ವೇದ ತಜ್ಞ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಭಾಗಿ

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್, ಪುತ್ತೂರು ವಲಯದ ವತಿಯಿಂದ ಮಹಾಮಾರಿ ಕೊರೋನಾ ವೈರಸ್ ನ ಹರಡುವಿಕೆಯಿಂದ ಮತ್ತು ಇದರಿಂದ ಬರುವ ಮಾರಕ ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಅರೋಗ್ಯ ಜಾಥಾ ಕಾರ್ಯಕ್ರಮ ಪುತ್ತೂರಿನ ದರ್ಬೆ ವೃತ್ತದಿಂದ ಇಂದು ಹಮ್ಮಿಕೊಂಡಿತ್ತು,

ಜಾಥಾದಲ್ಲಿ ಆಯುರ್ವೇದ ತಜ್ಞ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದರು.
ಜಾಥಾದಲ್ಲಿ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಪುತ್ತೂರು ವಲಯದ ಅಧ್ಯಕ್ಷ ಹರೀಶ್ ಏಲಿಯ, ಸುದೀರ್ ಕುಮಾರ್, ಸುದರ್ಶನ್ ರಾವ್, ಹಲವಾರು ಸದಸ್ಯರು ಭಾಗವಹಿಸಿದ್ದರು.

Leave A Reply

Your email address will not be published.