ಬೈರಾಸ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಬ್ಬರ್ ಟ್ಯಾಪರ್

ಸವಣೂರು : ಸುಳ್ಯ ತಾಲೂಕಿನ ಮರ್ಕಂಜದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಸವಣೂರು ಸಮೀಪದ ಇಡ್ಯಾಡಿ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರ್ಚ್ 16 ರಂದು ನಡೆದಿದೆ.

ಮರ್ಕಂಜದ ಪಾನತ್ತಿಲ ಕಬ್ಬಿನಡ್ಕ ಮನೆಯ ಉಮೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ.

ಮೃತ ಯುವಕ ಕಳೆದ ಕೆಲ ತಿಂಗಳಿನಿಂದ ಸವಣೂರಿನ ಇಡ್ಯಾಡಿ ಪದವು ಎಂಬಲ್ಲಿ ಫಾರ್ಮ್ಸ್ ವೊಂದರಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿಕೊಂಡಿದ್ದರು.

ಕುಡಿತದ ಚಟ ಹೊಂದಿದ್ದ ಯುವಕ ರಾತ್ರಿ ವಾಸವಿರುವ ಮನೆಯ ಹತ್ತಿರದ ರಬ್ಬರ್ ಮರದ ಕೊಂಬೆಗೆ ಬೈರಾಸ್ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Leave A Reply

Your email address will not be published.