ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ | ತಲಾ ಇಬ್ಬರಿಗೆ ಸೇವೆ ಮಾಡಿಸಲು ಮಾತ್ರ ಅವಕಾಶ, ಸರ್ಕಾರದ ಆದೇಶ

ಸುಬ್ರಹ್ಮಣ್ಯ, ಮಾ.15: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೊನಾ ಭೀತಿಯಿಂದ ರಾಜ್ಯ ಸರಕಾರ ಮುನ್ನಚ್ಚರಿಕೆಯಾಗಿ ಕೆಲವೊಂದು ನಿರ್ಧಾರಕ್ಕೆ ಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾಧಿಗಳ ಹಿತದೃಷ್ಟಿಯಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಇತ್ಯಾದಿ ಸೇವೆಗಳಿಗೆ ತಲಾ ಇಬ್ಬರಂತೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಸಾಮಾನ್ಯವಾಗಿ ಇಂತಹ ಪೂಜೆಗಳಿಗೆ ಇಡೀ ಕುಟುಂಬವೇ ಅಲ್ಲಿ ಬಂದು ಕೂರುತ್ತಿತ್ತು. ದೇವಳದ ಕಾರ್ಯನಿರ್ವಾಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

Leave A Reply

Your email address will not be published.