ಬಿಡುಗಡೆಯ ಸನಿಹದಲ್ಲಿ‌ “ಬದಲಾಗು “

ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಕಿರುಚಿತ್ರ ‘ಮಡಕೆ ಮಾತಾಡಿದಾಗ’ ತಂಡ ಇದೀಗ ಮತ್ತೊಂದು ಭರವಸೆಯ ಕಿರುಚಿತ್ರವನ್ನ ಸಿದ್ದಪಡಿಸಿದೆ.

ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಸುಳ್ಯದ ಹುಡುಗ ಬಹುಮುಖ ಪ್ರತಿಭೆ ನಯನ್ ಕುಮಾರ್ ಈ ಕಿರುಚಿತ್ರಕ್ಕೆ ಕಥೆ, ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜನಸಾಮಾನ್ಯರ ಬದುಕಿನ ಕತೆಯನ್ನು ಇಲ್ಲಿ ಸುಂದರವಾಗಿ ಕಟ್ಟಿ ಉತ್ತಮವಾದ ಸಂದೇಶವನ್ನ ಕಥೆಯ ಸುತ್ತ ಹೆಣೆಯಲಾಗಿದೆ.

“ಬದಲಾಗು” ನಯನ್ ಕುಮಾರ್ ಅವರ ಚೊಚ್ಚಲ ಕಿರುಚಿತ್ರವಾಗಿದ್ದು, ಅದನ್ನು ಆದಷ್ಟು ಬೇಗ ನೋಡುಗರ ಕಣ್ಣಮುಂದೆ ತರಲು ಚಿತ್ರತಂಡ ಕಾಯುತ್ತಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

Leave A Reply

Your email address will not be published.