ಪಾಲ್ತಾಡಿ | ಯಕ್ಷ ಮಿತ್ರ ವೃಂದದ 4ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

ಸವಣೂರು : ಪಾಲ್ತಾಡಿಯ ಯಕ್ಷ ಮಿತ್ರ ವೃಂದ ಇದರ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಮಕ್ಕಳ ರಂಗ ಪೂಜೆ,ಯಕ್ಷಗಾನ ಬಯಲಾಟ,ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಎ.11ರಂದು ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ನಡೆಯಿತು.

ಕೆಯ್ಯೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿ ಶ್ರೀಗೆಜ್ಜೆಗಿರಿ ನಂದನಬಿತ್ತಿಲ್‌ನಲ್ಲೂ ಪೂಜೆ ಸಲ್ಲಿಸಿ ಆಮಂತ್ರಣ ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಗೆಜ್ಜೆಗಿರಿ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ,ಕಾರ್ಯದರ್ಶಿ ಸುಧಾಕರ ಸುವರ್ಣ ತಿಂಗಳಾಡಿ,ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ,ಜಯಪ್ರಕಾಶ್ ಮಂಜುನಾಥನಗರ,ಜಗದೀಶ್ ಮಂಜುನಾಥನಗರ,ತಿಮ್ಮಪ್ಪ ಗೌಡ,ಪ್ರಜನ್,ಯಕ್ಷಮಿತ್ರವೃಂದದ ತಾರಾನಾಥ ಸಾಲ್ಯಾನ್ ಕೆ.ಎಸ್,ಗುರುಕಿರಣ್,ಪ್ರವೀಣ್ ಚೆನ್ನಾವರ,ಮೋಹನ್ ಪೂಜಾರಿ ಮೊದಲಾದವರಿದ್ದರು.

Leave A Reply

Your email address will not be published.