ಉಜಿರೆಯಲ್ಲಿ ‘ ಗೋಂದೋಳು ‘ ಜಾನಪದ ತುಳು ನಾಟಕ ಪ್ರದರ್ಶನ

ಉಜಿರೆ : ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ ಸಮೂಹ, ಉಜಿರೆ ವತಿಯಿಂದ ಉಜಿರೆಯ ಬಯಲು ರಂಗ ಮಂದಿರ ವನರಂಗದಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ ( ರಿ ) ಕಲಾವಿದರಿಂದ ಪ್ರೊ. ಅಮೃತ ಸೋಮೇಶ್ವರ ರಚಿತ ತುಳು ಜಾನಪದ ನಾಟಕ ‘ ಗೋಂದೋಳು’ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಯಶಸ್ವೀ ಪ್ರದರ್ಶನಗೊಂಡಿತು.

ಮೇಘನಾ ಕುಂದಾಪುರ, ಅರ್ಜುನ್ ಆಚಾರ್ಯ ಹಿನ್ನೆಲೆ ಸಂಗೀತ ; ಆರ್ಲ್ ಬ್ರಾನ್, ಶಶಾಂಕ್ ಐತಾಳ್, ಚಿನ್ಮಯಿ ಭಟ್ ಸಾಂಗತ್ಯ, ಶಿವರಾಂ ಪ್ರಸಾದ್ ರ ಪ್ರಸಾದನ, ರಂಗ ಪರಿಕರ ಬೃಜೇಶ್ ಉಚ್ಚಿಲ್, ಕಿರಣ್ ಕುಮಾರ್ ರಂಗ ಸಜ್ಜಿಕೆ, ಪ್ರವೀಣ್ ಕೊಡವೂರು ಹಾಗೂ ನಿಖಿಲ್ ಕುಮಾರ್ ಬೆಳಕಿನ ವಿನ್ಯಾಸದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದರು.

ಡಾ. ಬಲುಕುಮಾರ್ ಹೆಗ್ಡೆ ಸ್ವಾಗತಿಸಿ ಪ್ರಸ್ತಾವಿಸಿದರು. ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಸುಪ್ರಿಯಾ ಹರ್ಷೇದ್ರ ಕುಮಾರ್ ಉಪಸ್ಥಿತರಿದ್ದರು.

Leave A Reply

Your email address will not be published.