ಪಾಲ್ತಾಡಿ | ಚಾಕೋಟೆತ್ತಡಿ ದೈವಸ್ಥಾನಕ್ಕೆ ಕಸದಬುಟ್ಟಿ ಕೊಡುಗೆ

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ  ಬೊಳಿಕ್ಕಲ ಒಕ್ಕೂಟದ ವತಿಯಿಂದ  ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನಕ್ಕೆ ಕಸದ ಬುಟ್ಟಿಗಳನ್ನು ನೀಡಲಾಯಿತು.

 ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು,ಅಧ್ಯಕ್ಷ  ಸಂಜೀವ ಗೌಡ ಅಂಗಡಿಹಿತ್ಲು, ವಿಠಲ ಶೆಟ್ಟಿ ಗುತ್ತಿನಮನೆ,ಪ್ರವೀಣ್ ರೈ ನಡುಕೂಟೇಲು,ಸೀತಾರಾಮ ರೈ  ಕಲಾಯಿ, ಕರುಣಾಕರ ಕಲ್ಲಕಟ್ಟ, ಪ್ರತೀಕ್ ಖಂಡಿಗೆ,ತಾರನಾಥ ಬೊಳಿಯಾಲ ,ವಿನಯಚಂದ್ರ ಕೆಳಗಿನಮನೆ,ಗುರು ಕಿರಣ್ ಬೊಳಿಯಾಲ, ಪ್ರದೀಪ್ ರೈ ಯೋಜನೆಯ ಒಕ್ಕೂಟದ ಅಧ್ಯಕ್ಷ ಧನಂಜಯ, ಕಾರ್ಯದರ್ಶಿ ಪುಷ್ಪಾವತಿ, ಹಾಗೂ ಸದಸ್ಯೆ ಕಮಲ ಉಪಸ್ಥಿತರಿದ್ದರು.

Leave A Reply

Your email address will not be published.