ಶಾಲೆಗೆ ತೆರಳದೆ ಮನೆಯಲ್ಲಿದ್ದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಹೋಗುವಂತೆ ಮಾಡಿದ ಚಾರ್ವಾಕ ಬೀಟ್ ಪೊಲೀಸ್

ಶಾಲೆಗೆ ತೆರಳದೇ ಮನೆಯಲ್ಲಿ ಉಳಿದುಕೊಂಡಿದ್ದ ಮೂವರು ವಿದ್ಯಾರ್ಥಿಗಳ ಮನವೊಲಿಸಿ ಪುನಃ ಶಾಲೆಗೆಸೇರಿಸುವಲ್ಲಿ ಕಡಬ ಪೊಲಿಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಬೀಟ್ ಪೊಲೀಸ್ ಭವಿತ್‌ರಾಜ್ ಯಶಸ್ವಿ ಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಚಾರ್ವಾಕ ಶಾಲೆ ಇಲ್ಲಿನ ಮುಖ್ಯಗುರುಗಳಾದ ಪಾರ್ವತಿ ಅವರು ನೀಡಿದ ಮಾಹಿತಿಯಂತೆ ಶಾಲೆಗೆ ಹೋಗದಂತಹ ಮಕ್ಕಳಾದ ಸುಶ್ಮಿತಾ,ಪ್ರಮೋದ್, ಸುಜಿತ್ ಅವರ ಮನೆಗೆ ತೆರಳಿ ಶಾಲೆಗೆ ಹೋಗುವಂತೆ ಪೋಷಕರು ಹಾಗೂ ಮಕ್ಕಳಿಗೆ ತಿಳಿ ಹೇಳಲಾಯಿತು.

ಮಕ್ಕಳು ಶಾಲೆಗೆ ಹೋಗುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮುಖ್ಯಗುರುಗಳಾದ ಪಾರ್ವತಿ ,ಶಿಕ್ಷಕರಾದ ಶಂಕರ್, ನಯನ ಕುಮಾರಿ, ಚಾರ್ವಾಕ ಬೀಟ್ ಪೊಲೀಸ್ ಭವಿತ್ ಹಾಜರಿದ್ದರು.

Leave A Reply

Your email address will not be published.