ಹಿರೇಬಂಡಾಡಿಯ ಯುವಕ ಮನೋಜ್ ಮಂಗಳೂರಿನ ಲಾಡ್ಜ್ ನಲ್ಲಿ ಸಂಶಯಾಸ್ಪದ ಸಾವು !

ಹಿರೇಬಂಡಾಡಿಯ ಯುವಕ ಮನೋಜ್ ಮಂಗಳೂರಿನಲ್ಲಿ ಸಂಶಯಾಸ್ಪದವಾಗಿ ಮೃತರಾಗಿದ್ದಾರೆ. ನಿನ್ನೆ ಅವರ ಮೃತ ದೇಹ ಮಂಗಳೂರಿನ ದರ್ಬಾರ್ ಲಾಡ್ಜ್ ನಲ್ಲಿ ದೊರೆತಿದೆ. ಅವರ ದೇಹವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇತ್ತು.

ಮೃತ ಮನೋಜ್ ಹಿರೇಬಂಡಾಡಿ ಗ್ರಾಮದ ಜಾಲ್ ಚೆನ್ನಪ್ಪಗೌಡರ ಪುತ್ರ ( 31).

ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಕೊನೆಗೆ ನಿನ್ನೆ ಬೆಳಿಗ್ಗೆ ಲಾಡ್ಜ್ ನಲ್ಲಿ ದೊರೆತಿದೆ. ಮನೆಯವರು ಬರುವಷ್ಟರಲ್ಲಿ ಲಾಡ್ಜ್ ನ ಬಾಗಿಲು ಒಡೆದು ಅವರನ್ನು ಇಳಿಸಿದ್ದರು.

ನಿನ್ನೆ ಇಡೀ ದಿನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಶವವನ್ನು ಇರಿಸಿಕೊಂಡು ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಆನಂತರ ತಡರಾತ್ರಿ ಮನೋಜ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಹಿರೇಬಂಡಾಡಿಗೆ ತರಲಾಯಿತು.

ಮಂಗಳೂರಿನಲ್ಲಿ ಮೆಡಿಕಲ್ ರೆಪ್ರಸೆ0ತೇಟಿವ್ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ಅವರು ಪತ್ನಿಯ ಜತೆ ಮಂಗಳೂರಿನಲ್ಲಿ ವಾಸವಾಗಿದ್ದರು. ಅವರಿಗೆ ತೀರಾ ಇತ್ತೀಚೆಗೆ, ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಮನೆಯಲ್ಲಿ ಹೇಳಿಕೊಳ್ಳುವಂಥ ಸಮಸ್ಯೆ ಇರಲಿಲ್ಲ. ಅವರು ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು.

ಅವರು ತನ್ನ ಬೈಕ್ ಅನ್ನು ಪುತ್ತೂರಿನಲ್ಲಿ ಪಾರ್ಕ್ ಮಾಡಿ ಮಂಗಳೂರಿಗೆ ಹೋಗಿದ್ದರು. ಪುತ್ತೂರಿನಲ್ಲಿ ಬೈಕನ್ನು ಬಿಟ್ಟು ಮಂಗಳೂರಿಗೆ ಯಾಕೆ ಹೋದರು ಎಂಬುದಕ್ಕೆ ಕಾರಣ ಸಿಗುತ್ತಿಲ್ಲ. ಅಲ್ಲದೆ ಡೆತ್ ನೋಟ್ ಸಹಾ ಬರೆದಿಟ್ಟಿಲ್ಲ. ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನೂ ಬರಬೇಕಿದೆ.

Leave A Reply

Your email address will not be published.