ಸುದ್ದಿ ಬಿಡುಗಡೆ ಸಂಪಾದಕ ಡಾ|ಯು.ಪಿ. ಶಿವಾನಂದ ಮತ್ತು ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕದಂಬ ರಾಜ್ಯ ಪ್ರಶಸ್ತಿ

ಸುದ್ದಿ ಬಿಡುಗಡೆಯ ಸಂಪಾದಕ ಡಾ| ಯು .ಪಿ. ಶಿವಾನಂದ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣ ಕದಂಬ ರಾಜ್ಯ ಪ್ರಶಸ್ತಿ ಕೊಡಮಾಡಿದೆ.

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಮನಗರ ಜಿಲ್ಲಾ ಘಟಕದ ವತಿಯಿಂದ ನಡೆದ, 12 ನೆಯ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿತ್ತು. ಪತ್ರಿಕಾರಂಗದಲ್ಲಿ ಸುಧೀರ್ಘ ಸಾಧನೆ ಮಾಡಿದ, ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ಪ್ರತಿ ಮನೆಯನ್ನು ತಲುಪಿದ ಸಾಧನೆ ಡಾ| ಯು .ಪಿ. ಶಿವಾನಂದ ಅವರದು. ಅದೇ ರೀತಿ ಸಹಕಾರಿ ಕ್ಷೇತ್ರದ ದೀರ್ಘ ಸೇವೆಗಾಗಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಈ ಪ್ರಶಸ್ತಿ ಸಂದಿದೆ.

ಇವರೀರ್ವರ ಜತೆ ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಕ ದಯಾನಂದ ರೈ, ದುಬೈ ಉಯಾಮಿ ಅಶ್ರಫ್ ಶಾ ಮಾಂತೂರ್, ಆರ್ ಮನ್ಸಯ್ಯ, ಬಸವರಾಜ್ ಸಬ್ರದ್, ರಾಘವೇಂದ್ರ ಬೆಂಗಳೂರು ಇವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಮಾರಂಭದಲ್ಲಿ ಎಚ್ ಡಿ ಕುಮಾರಸ್ವಾಮಿ, ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ರಾಜ್ಯಅಧ್ಯಕ್ಷ ಪಿ. ಕೃಷ್ಣೇಗೌಡ, ತುಮಕೂರು ಬ್ರಹ್ಮಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧಿಪತಿ ನಂಜಾವ ಧೂತ ಸ್ವಾಮೀಜಿ ಮತ್ತು ಹಲವು ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Leave A Reply

Your email address will not be published.