ಶಾಂತಿಮೊಗರು ಶ್ರೀ ಸುಬ್ರಹ್ಮಣ್ಣೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಕಾಣಿಯೂರು : ಬ್ರಹ್ಮಕಲಶ ಸಿದ್ದತೆಯಲ್ಲಿರುವ ಕಡಬ ತಾಲೂಕು ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಣೇಶ್ವರ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆಯಿತು.

ಬೆಳಿಗ್ಗೆ ಅನುಜ್ಞಾ ಕಲಶ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಸ್ಥಾನದ ಅನುವಂಶಿಯ ಮೊಕ್ತೆಸರರಾದ ಪ್ರವೀಣ್ ಕೆಡೆಂಜಿಗುತ್ತು, ಹರೀಶ್ ಆಚಾರ್ ನಗ್ರಿಗುತ್ತು, ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ ಸೀತಾರಾಮ ರೈ, , ರಾಜ್‍ದೀಪಕ್ ಜೈನ್ ಕುದ್ಮಾರು ಗುತ್ತು ಮೊದಲಾದವರು ಇದ್ದರು.

Leave A Reply

Your email address will not be published.