ಶಾಂತಿಮೊಗರು: ಬ್ರಹ್ಮಕಲಶದ ಆಮಂತ್ರಣ ಡಾ.ಹೆಗ್ಗಡೆ ಅವರಿಂದ ಬಿಡುಗಡೆ
ಬೆಳಂದೂರು: ಎಪ್ರಿಲ್ ನಲ್ಲಿ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸವಣೂರು ಕೆ.ಸೀತಾರಾಮ ರೈ,ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ , ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಗೌಡ ರಾಶಿ ಬರೆಪ್ಪಾಡಿ. ಕಾರ್ಯದರ್ಶಿ ವೆಂಕಟೇಶ ಭಟ್ ಕೊಯಕುಡೆ ಆರ್ಥಿಕ ಸಮಿತಿ ಸದಸ್ಯ ಲೋಕನಾಥ್ ವಜ್ರಗಿರಿ,ಕಾರ್ಯಾಲಯ ಸಮಿತಿ ಸದಸ್ಯ ನಾಗೇಶ ಕೆ. ಕೆಡೆಂಜಿ. ಪ್ರಚಾರ ಸಮಿತಿ ಸಂಚಾಲಕ ಉಮಾಪ್ರಸಾದ್ ರೈ ನಡುಬೈಲು,ಮನ್ವಿತ್ ಪಂಜ ರವರು ಉಪಸ್ಥಿತರಿದ್ದರು.